ಮೈಸೂರು: ಅಖಂಡ ಕರ್ನಾಟಕ ರಕ್ಷಣ ಸೇವಾದಳದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ,ಆಚರಿಸಲಾಯಿತು,
ನಗರದ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮವನ್ನ ಮಹಾರಾಣಿ ಕಾಲೇಜು ಪ್ರಾಧ್ಯಾಪಕರಾದ ಶ್ರೀಮತಿ ರತ್ನಮ್ಮ ಉದ್ಘಾಟಿಸಿದರು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆ ಅಬಲೆಯಲ್ಲ,ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ, ಸಂಸಾರದಲ್ಲಿ ಹೆಣ್ಣು ಗಂಡೂ ಸಮಾನರೂ, ಸಂಸಾರದ ಬಂಡಿ ಸಮಾನವಾಗಿ ಸಾಗಿದಾಗ ಕುಟುಂಬ ಸುಖಮಯವಾಗಿರುತ್ತದೆ,ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಮೂಲಕ, ಸಮಾಜದ ಸತ್ಪಜೆಗಳಾಗಿ ಮಾಡುವ ಕಡೆ ಹೆಚ್ಚು ಗಮನಹರಿಸಬೇಕು,ಅಖಂಡ ಕರ್ನಾಟಕ ರಕ್ಷಣಾ ಸೇವಾದಳದಿಂದ ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿದೆ.ಕಷ್ಟದಲ್ಲಿ ನೊಂದ ನೂರಾರು ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುವ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ,ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ// ಶಿವು ಸಿಂಹಗೌಡ ಭಾರತೀಯ ಮಾತನಾಡಿ ಸಮಾಜದಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದೆ, ಅವರಿಗೆ ಗಂಡಸರಿಗೆ ಸರಿಸಮಾನವಾದ ಗೌರವಾದರಗಳನ್ನ ನೀಡಬೇಕು, ಹೆಣ್ಣುಮಕ್ಕಳು ಶಿಕ್ಷಣದ ಕಡೆಹೆಚ್ಚು ಗಮನ ನೀಡಬೇಕು, ಹೆಣ್ಣುಮಕ್ಕಳು ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಿದಾಗ ಪುರುಷಪ್ರಧಾನ ಗೌರವ ನೀಡುತ್ತದೆ.ಮಹಿಳೆಯರು ತಮ್ಮ ಕುಟುಂಬದಲ್ಲಿ ಮಕ್ಕಳಿಗೆ ಹೆಚ್ಚು ಶಿಕ್ಷಣ ನೀಡಿ, ತಮ್ಮ ಆರ್ಥಿಕಗಳಿಕೆ ಸ್ವಲ್ಪಪ್ರಮಾಣವಾದರೂ ಉಳಿತಾಯಮಾಡಿ,ತಮ್ಮ ಉಳಿತಾಯದ ಹಣ ನಿಮ್ಮ ಭವಿಷ್ಯಕ್ಕೆ ನೆರವಾಗುತ್ತದೆ,ಎಂದು ತಿಳಿಸಿದರು
ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಅಪ್ಪುಕುಶಾನಿ ಫೈನಾನ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಹಾಗೂ ಅಖಂಡ ಕರ್ನಾಟಕ ರಕ್ಷಣಾ ದಳದ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ಲಲಿತಾ ಶಿವು ಸಿಂಹಗೌಡ,ರವರಿಗೆ ಸೀಂಮತ ಕಾರ್ಯ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿ ಕನ್ಯಾಶ್ರೀ ಲಿಂಬೆಹಳ್ಳಿ ರಾಜ್ಯ ಮಹಿಳಾ ಕಾರ್ಯದರ್ಶಿ ಸೌಮ್ಯಶ್ರೀ,ರಾಜ್ಯಕಾರ್ಯದರ್ಶಿ ವೆಂಕಟೇಶ್ ಗೌಡ,ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದರು.ನೂರಾರು ಜನ ಸಂಘಟನೆಗೆ ಸೇರ್ಪಡೆಗೊಂಡರು
ವರದಿ :ಮಂಜುನಾಥ್ ಹಾಲ್ಕುರಿಕೆ