KALPATHARU KRANTHI

ಕರಪತ್ರ ಹುಟ್ಟುಹಾಕಿದ ಅನುಮಾನ… ಜೆಡಿಎಸ್ ನಿಂದ ದೂರವಾಗ್ತರಾ..? ಕೆ.ಟಿ ಶಾಂತಕುಮಾರ್ ….

IMG-20250308-WA0038
Spread the love

ತಿಪಟೂರು ಜೆಡಿಎಸ್ ಮುಖಂಡ ಹಾಗೂ ಜೆಡಿಎಸ್ ಪಾರಾಜಿತ ಅಭ್ಯಾರ್ಥಿ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ನಡೆಯುತ್ತಿರು, ತಿಪಟೂರಿನ ಜನರ ಕುಡಿಯುವ ನೀರಿನ ಸಮಸ್ಯೆಗಳ ಕುರಿತ ಹೋರಾಟ,ಹಲವಾರು ಅನುಮಾನಗಳನ್ನ ಹುಟ್ಟಿಹಾಕಿದೆ.

ತಿಪಟೂರಿನ ಮಟ್ಟಿಗೆ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರು ಹಾಗೂ ಮೈತ್ರಿ ನಾಯಕರಾಗಿರುವ ಕೆ.ಟಿ ಶಾಂತಕುಮಾರ್,ಕಳೆದ ವಿಧಾನಸಭೆ ಚುನಾವಣೆ ಜೆಡಿಎಸ್ ಪಕ್ಷದ ಅಭ್ಯಾರ್ಥಿಯಾಗಿದರು,ಹಾಗೂ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಧರ್ಮಪಾಲಿಸಿ ಪಕ್ಷದ ಸೂಚನೆಯಂತೆ ಸೋಮಣ್ಣನ ಪರವಾಗಿ ಕೆಲಸಮಾಡಿದರು,ಚುನಾವಣಾ ಪೂರ್ವದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದ ಅವರ ಯಾಕೋ ನಂತರದ ದಿನಮಾನಗಳಲ್ಲಿ ಮಂಕಾಗಿದ್ದಾರೆ.

ಪಕ್ಷದ ಮುಖವಾಣಿಯಾಗಿ ತಾಲ್ಲೋಕಿನಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿಎತ್ತಬೇಕಿತ್ತು, ಆದರೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಂಗೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ,ಎನ್ನುವ ಅನುಮಾನದ ಮಾತುಗಳು ಕಾರ್ಯಕರ್ತರ ಮೊಗಸಾಲೆಯಲ್ಲಿ ಕೇಳಿಬರುತ್ತಿವೆ,ಸಾರ್ವಜನಿಕರ ಮಾತಿಗೆ ಇಂಬುನೀಡುವಂತೆ ,ಕೆಲ ತಿಂಗಳುಗಳ ಹಿಂದೆ ಬಿಜಿಎಸ್ ಸಮುದಾಯ ಭವನದಲ್ಲಿ ಕೆ.ಟಿ ಶಾಂತಕುಮಾರ್ ಆಯೋಜಿಸಿದ ಶಾಂತಕುಮಾರ್ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಬಹುತೇಕ ಜೆಡಿಎಸ್ ಪ್ರಭಾವಿ ನಾಯಕರುಗಳಿಗೆ ಆಹ್ವಾನ ನೀಡಿಲ್ಲ,ಕೆಲ ಆಯ್ದ ವ್ಯಕ್ತಿಗಳನ್ನ ಮಾತ್ರಕರೆದಿದ್ದಾರೆ,ಚುನಾವಣೆಯಲ್ಲಿ ಪಕ್ಷ ಹಾಗೂ ಪಕ್ಷದ ನಾಯಕರಿಗಾಗಿ ಹಗಲಿರುಳು ಶ್ರಮಿಸಿದ ಮುಖಂಡರು ಹಾಗೂ ಕಾರ್ಯಕರ್ತರನ್ನ ಕಡೆಗಣಿಸಲಾಗಿದೆ,ಎನ್ನುವ ಆರೋಪಗಳು ಕೇಳಿ ಬಂದಿತ್ತು. ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು,ಎಲ್ಲಾ ಕಾರ್ಯಕರ್ತರನ್ನ ಒಗ್ಗೂಡಿಸಿ ಮುಂದಿನ ಚುನಾವಣೆಗಾದರೂ ಭದ್ರನೆಲೆ ಕಂಡುಕೊಳ್ಳುತ್ತಾರೆ,ಎನ್ನುವಾಗ ಕೆ.ಟಿ ಶಾಂತಕುಮಾರ್ ,ನೇತೃತ್ವದಲ್ಲಿ ಸೋಮವಾರ ನಡೆಯುತ್ತಿರು ಪ್ರತಿಭಟನೆಯ ಕರಪತ್ರ ಹಲವಾರು ಅನುಮಾನಗಳನ್ನ ಹುಟ್ಟಿಹಾಕಿದ್ದೇವೆ,ಕರಪತ್ರದಲ್ಲಿ ಜೆಡಿಎಸ್ ಪಕ್ಷದ ಚಿಹ್ನೆಯಾಗಲಿ ಅಥವಾ ಜೆಡಿಎಸ್ ವರೀಷ್ಠಾ ನಾಯಕ ದೇವೆಗೌಡ್ರು ಹಾಗೂ ಹೆಚ್.ಡಿ ಕುಮಾರಸ್ವಾಮಿ ಸೇರಿ ಯಾವ ನಾಯಕರ ಭಾವಚಿತ್ರವಿಲ್ಲದಂತೆ, ಆಗಿರುವುದು ತಾಲ್ಲೂಕಿನಲ್ಲಿ ಸಾರ್ವಜನಿಕರಲ್ಲಿ ಎದ್ದಿರುವ ಅನುಮಾನಗಳಿಗೆ ಇಂಬುನೀಡುತ್ತಿದೆ,ಕೆ.ಟಿ ಶಾಂತ ಕುಮಾರ್ ಜೆಡಿಎಸ್ ನಿಂತ ಅಂತರ ಕಾಯ್ದುಕೊಳ್ತಿದ್ದಾರಾ..?, ಅಥವಾ ಜೆಡಿಎಸ್ ಗೆ ಅಲರ್ಜಿಯಾದ್ರ ಶಾಂತಕುಮಾರ್ ಅನೋ ಅನುಮಾನ ಮೊಳಕೆಯೊಡೆಯ ತೊಡಗಿದೆ. ಕೆಲ ಜೆಡಿಎಸ್ ನಾಯಕರಂತು, ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ, ಎಲ್ಲಾ ಸಾರ್ವಜನಿಕರ ಅನುಮಾನಗಳಿಗೆ ಶಾಂತಕುಮಾರ್ ಮುಂದಿನ ದಿನಗಳಲ್ಲಿ ಯಾವ ದಾರಿಯಲ್ಲಿ ಉತ್ತರ ನೀಡ್ತಾರೆ ಕಾದುನೋಡಬೇಕಿದೆ….!

Exit mobile version