ಬೆಳ್ಳಂಬೆಳ್ಳಗ್ಗೆ ಪೊಲೀಸ್ ಕ್ವಾಟ್ರಸ್ ಪಕ್ಕದಲ್ಲೆ ಮಹಿಳೆಯೋರ್ವಳ ಸರಗಳ್ಳತನಕ್ಕೆ,ಮನೆಯ ಹಿಂಬದಿಯಿಂದ ಬಂದು ಸರಗಳ್ಳತನಕ್ಕೆ ಯತ್ನಿಸಿ ಮಹಿಳೆಕೂಗಾಟ,ಕೇಳಿ ಸಾರ್ವಜನಿಕರು ಬಂದಾಗ ಮಹಿಳೆಯನ್ನ ತಳ್ಳಿ ಕಳ್ಳ ಪಾರಾರಿಯಾಗಿರುವ ಘಟನೆ ನಗರದ ಅರಣ್ಯ ಇಲಾಖೆ ಕ್ವಾಟ್ರಸ್ ನಲ್ಲಿ ನಡೆದಿದೆ.
ತಿಪಟೂರು ನಗರದ ಹೆಚ್ಚು ಸುರಕ್ಷಿತ ಪ್ರದೇಶ ಎಂದೇ ಪರಿಗಣಿಸಿರುವ ಒಂದೆಡೆ, ಪೊಲೀಸ್ ಇಲಾಖೆ, ಕ್ವಾಟ್ರಸ್,ಇನ್ನೋದೆಡೆ, ನ್ಯಾಯಲಯ ಸಮುಚ್ಚಯ, ತಾಲ್ಲೋಕು ಆಡಳಿತ ಸೌಧ ಹಾಗೂ ಸ್ಪಲ್ಪದೂರದಲ್ಲಿಯೇ ಹಲವಾರು ಇಲಾಖೆಗಳ ಕಚೇರಿ ಹೊಂದಿರುವ ಪ್ರಮುಖ ಸ್ಥಳವಾದ ಅರಣ್ಯ ಇಲಾಖೆಯ ಕ್ವಾಟ್ರಸ್ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರ ಪತ್ನಿ ಸೌಮ್ಯ ಎಂಬುವವರ ಸರಕಳ್ಳ ತನಕ್ಕೆ ಯತ್ನಿಸಲಾಗಿದೆ,
ಬೆಳಗ್ಗೆ ತನ್ನ ಮನೆಯ ಅಡುಗೆ ಕೋಣೆಯಲ್ಲಿ ಸೌಮ್ಯ ಅಡುಗೆ ಮಾಡುತ್ತಿದ್ದಾಗ, ಮನೆಹಿಂಬದಿಯಿಂದ ಯಾರೋ ಮುಸುಕುದಾರಿ, ಹಾದುಹೋಗಿರುವುದು,ಕಂಡಿದೆ, ನಮ್ಮ ಮನೆಹಿಂಭಾಗ ಯಾರು ಹೋಗುತ್ತಿರ ಬಹುದೆಂದು ಅನುಮಾನಗೊಂಡ ಮಹಿಳೆ ಮನೆಹಿಂಬದಿಹೋಗಿ ನೋಡಿದ್ದಾಗ, ಮನೆಹಿಂದೆ ಇಟ್ಟಿದ ಡ್ರಮ್ ಹಿಂಬಾಗ ಅವಿತುಕುಳಿತ್ತಿದ,ಮುಸುಕುದ್ದಾರಿ,ಕಳ್ಳ, ಮಹಿಳೆಯ ಕತ್ತಿಗೆ ಕೈ ಹಾಕಿ ಕೊರಳಿನಲ್ಲಿ ಇದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು,ಯತ್ನಿಸಿದ್ದು, ಮಹಿಳೆ ಸರವನ್ನ ಕೈಯಲ್ಲಿ ಬೀಗಿಯಾಗಿ ಹಿಡಿದು, ಜೋರಾಗಿ ಕೂಗಿಕೊಂಡಾಗ, ಮುಸುಕುದಾರಿ ಕಳ್ಳ ಮಹಿಳೆಯನ್ನ ಜೋರಾಗಿ ತಳ್ಳಿದ್ದಾನೆ, ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಬಂದಿದ್ದನ್ನ ಗಮನಿಸಿ,ಕಳ್ಳ ಓಡಿಹೋಗಿದ್ದಾನೆ,ಸಾರ್ವಜನಿಕರು ಎಲ್ಲಾಕಡೆ ಹುಡುಕಿದರು ಸಿಕ್ಕಿಲ್ಲ,ತಕ್ಷಣ,ಈ ಬಗ್ಗೆ ತಿಪಟೂರು ನಗರಪೊಲೀಸ್ ಠಾಣೆಗೆ ದೂರು ನೀಡಲಾಗಿದೆ,
ತಿಪಟೂರಿನಲ್ಲಿ ಸರಗಳ್ಳರು ಹಾಗೂ ಮನೆಗಳ್ಳರ ಹಾವಳಿ ಹೆಚ್ಚಾಗಿದ್ದು ಪೊಲೀಸ್ ಇಲಾಖೆ ಕಠಣಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ :ಮಂಜುನಾಥ್ ಹಾಲ್ಕುರಿಕೆ
