ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಜನರ ಬಹುನಿರೀಕ್ಷಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕಳಪೆಕಾಮಗಾರಿ ಕಂಡುಬಂದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ
.ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ,ತುಮಕೂರಿನಿಂದ ಹೊನ್ನಾವಾರದ ವರೆಗೆ ನಡೆಯುತ್ತಿರುವ ಸುಮಾರು 250 ಕೋಟಿಗೂ ಹೆಚ್ಚು ಹೆಚ್ಚದ ಕಾಮಗಾರಿಯಲ್ಲಿ ಕಳೆಪೆಕಾಮಗಾರಿಯ ಆರೋಪಗಳು ಕೇಳಿಬಂದಿವೆ, ಸಾರ್ವಜನಿಕರ ಆರೋಪಕ್ಕೆ ಇಂಬು ನೀಡುವಂತ್ತೆ ತಿಪಟೂರು ತಾಲ್ಲೋಕಿನ ಹಾಲ್ಕುರಿಕೆ ರಸ್ತೆಯ ಟಿ.ಎಂ ಮಂಜುನಾಥ್ ನಗರ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ರಸ್ತೆ ಕುಸಿದ್ದಿದ್ದು, ವಾಹನ ಸವಾರರಿಗೆ ಆತಂಕ ಉಂಟುಮಾಡಿದೆ,ಕಾಮಗಾರಿ ನಿರ್ಮಾಣವಾಗಿ ಕೇವಲ ಆರು ತಿಂಗಳು ಕಳೆಯುವ ಒಳಗಾಗಿಯೇ, ರಸ್ತೆಯಲ್ಲಿ ಕುಸಿತವಾಗಿರುವುದು, ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.ಕೇವಲ 4ಇಂಚು ಕಾಂಕ್ರೇಟ್ ಹಾಕಿದ್ದು 12 ಎಂ.ಎಂ ಕಬ್ಬಿಣ ಬಳಸಲಾಗಿದೆ,ಕಳಪೆಕಾಮಗಾರಿಗೆ ಸಾಕ್ಷಿಎನ್ನ ಬಹುದು, ಅಲ್ಲದೆ ಹೆದ್ದಾರಿಯಲ್ಲಿ ಕುಸಿತವಾಗಿರುವ ಸ್ಥಳದ ಪಕ್ಕದಲ್ಲೆಯೇ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಇದ್ದು ಭಾರೀ ವಾಹನಗಳು ಸಂಚರಿಸುವಾಗ ಬ್ರಿಡ್ಜ್ ಕಂಪನವಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಮೂರ್ನಾಲ್ಕು ಕಡೆ ರಸ್ತೆ ಕುಸಿತವಾಗಿರುವ ಕಾರಣ ಹೆದ್ದಾರಿ ಗುತ್ತಿಗೆದಾರರು ತಾತ್ಕಾಲಿಕ ತೇಪೆಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿರುವ ಕಾಮಗಾರಿಯಲ್ಲಿ ಕಳಪೆ ಕಾಮಗಾರಿಯ ವಾಸನೆ ಕಂಡುಬಂದಿದ್ದು,
ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಏಜನ್ಸಿಗಳು,ಕಾಮಗಾರಿ ಕಳೆಪೆಯಾಗಿದದರೂ,ಯಾವುದೇ ತಲೆಕೆಡಿಸಿಕೊಂಡಿಲ್ಲ, ಅಲ್ಲದೇ ಪ್ರತಿದಿನ ನೂರಾರು 10ವೀಲರ್,12ವೀಲರ್ ಗೂ ಹೆಚ್ಚಿನ ಭಾರೀ ಗಾತ್ರದ ವಾಹನಗಳು ಸಂಚರಿಸುವುದರಿಂದ, ಕಳಪೆಕಾಮಗಾರಿಯಿಂದ ಯಾವ ಅನಾಹುತವಾಗುವುದೊ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಸ್ಥಳ ತನಿಖೆ ಮಾಡಿ, ಪ್ರಗತಿಯಲ್ಲಿರುವ ಕಾಮಗಾರಿ ಪರಿಶೀಲನೆ ಮಾಡಬೇಕು ಹಾಗೂ ಕಳಪೆಕಾಮಗಾರಿ ಕಂಡುಬಂದರೆ ಕೂಡಲೆ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
ವರದಿ :ಮಂಜುನಾಥ್ ಹಾಲ್ಕುರಿಕೆ
