ರಾಜ್ಯ ಸರ್ಕಾರ ರೈತರು ಸಾಗುವಳಿಮಾಡುತ್ತಿರುವ ಜಮೀನಿಗೆ ಬಗರ್ ಹುಕ್ಕುಂ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿ ಫೆಬ್ರವರಿ 24 ರಂದು ಸೋಮವಾರ ತಿಪಟೂರು ಆಡಳಿತ ಸೌಧದ ಮುಂಬಾಗ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ತಿಪಟೂರು ಶಾಸಕರು ಹಾಗೂ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರಾಂತರೈತ ಸಂಘದ ಅಧ್ಯಕ್ಷ ರಂಗಾಪುರ ಚನ್ನಬಸವಣ್ಣ ತಿಳಿಸಿದರು
ನಗರದ ಖಾಸಗೀ ಹೋಟೆಲ್ ನಲ್ಲಿ ಪತ್ರಿಕಾಘೋಷ್ಠಿ ನಡೆದಿದ ಅವರು ರಾಜ್ಯದಲ್ಲಿ ಸರ್ಕಾರ ಬಗರ್ ಹುಕ್ಕು ಸಾಗುವಳಿ ನೀಡಲು ಅರ್ಜಿ ಆಹ್ವಾನ ಮಾಡಿ ದಶಕಗಳೆ ಕಳೆಯುತ್ತಿವೆ, ಆದರೆ ಸಾಗುವಳಿ ಚೀಟಿ ಪಡೆಯುವ ರೈತರ ಕನಸು ಮಾರೀಚಿಕೆಯಾಗಿದ್ದು, ರೈತರು ಭ್ರಮನಿರಸನಗೊಂಡಿದ್ದಾರೆ,ಸರ್ಕಾರಸಾಗುವಳಿಗೆ ಪತ್ರ ನೀಡಲು ವಿಧಿಸಿರುವ ಷರತ್ತುಗಳು ದೋಷಪೂರಿತವಾಗಿದ್ದು, ಕಳೆದ ಇಪತ್ತು ಮುವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಅನ್ಯಾಯವಾಗುತ್ತಿದೆ, ಸರ್ಕಾರ ಕೂಡಲೇ, ಸರ್ಕಾರಿಗೋಮಳ,ಹುಲ್ಲುಬನ್ನಿ ಕರಾಬು, ಸೇದಿವನಗಳಿಗೆ,ಮುಂಜೂರಿಗೆ ಅವಕಾಶ ನೀಡಬೇಕು, ಅರಣ್ಯದಂಚಿನಲ್ಲಿ ಹಲವಾರು ವರ್ಷಗಳಿಂದ ಭೂಮಿ ಉಳಿಮೆ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರನ್ನ ಒಕ್ಕಲೆಬಿಸಲು,ಅರಣ್ಯ ಇಲಾಖೆ ಮುಂದಾಗಿದ್ದು, ಜೀವನಾಧಾರಕ್ಕೆ ಜಮೀನು ಉಳಿಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡ ಬೇಕು
ಬೆಸ್ಕಾಂ ಇಲಾಖೆ ರಾತ್ರಿ ವೇಳೆ ರೈತರ ತೋಟದ ಮನೆಗಳಿಗೆ ಕರೆಂಟ್ ಇಲ್ಲದಂತೆವಮಾಡುತ್ತಿದ್ದು,ರಾತ್ರಿ ವೇಳೆ ಕರೆಂಟ್ ತೆಗೆಯುವುದರಿಂದ ರಾತ್ರಿವೇಳೆ ಪರೀಕ್ಷಾ ಸಮಯವಾದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು,ವಚಿರತೆ ಕಾಟ, ಕಾಡುಪ್ರಾಣಿಗಳ ಕಾಟ ಹೆಚ್ಚಾಗಿರು ಸಮಯದಲ್ಲಿ ಕತ್ತಲಿನಲ್ಲಿ ರೈತರು ಬದುಕಬೇಕಿದೆ ಆದರಿಂದ ಸರ್ಕಾರ ರೈತರ ತೋಟದ ಮನೆಗಳಿಗೆ ವಿದ್ಯುತ್ ನೀಡಬೇಕು ಒತ್ತಾ ಯಿಸಿ ತಿಪಟೂರು ತಾಲ್ಲೋಕು ಆಡಳಿತ ಸೌಧದ ಮುಂದೆ ಫೆಬ್ರವರಿ 24ರಂದು ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಗುವುದು,ಎಂದು ತಿಳಿಸಿದರು.ಪತ್ರಿಕಾಘೋಷ್ಠಿಯಲ್ಲಿ ಪ್ರಾಂತ್ಯ ರೈತರ ಸಂಘದ ಮುಖಂಡರಾದ ಮಲ್ಲಿಕಾರ್ಜುನಯ್ಯ.
ಬಳುವನೇರಲುಸಿದ್ದಯ್ಯ.ಸುಧಾಕರ್,ಕೊಟ್ಟೂರಪ್ಪ,ಮಂಜುನಾಥ್ ಮೀಸೆತಿಮ್ಮನಹಳ್ಳಿ,ರಾಜಮ್ಮ.ಮುಂತ್ತಾದವರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ