KALPATHARU KRANTHI

ವೈಭವಿ ತಾಯಿ ಮತ್ತು ಮಕ್ಕಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಾರ್ಷಿಕೋತ್ಸವ:ಗ್ರಾಮೀಣ ಪ್ರದೇಶದ ಜನರಿಗೆ ಅತ್ಯುತ್ತಮ ಸೇವೆ ನೀಡುವ ಭರವಣೆ ನೀಡಿದ ಡಾ//ಮಧುಸೂಧನ್

IMG-20250128-WA0007
Spread the love

ತುಮಕೂರು ಜಿಲ್ಲೆ ತಿಪಟೂರು ನಗರದ ವೈಭವಿ ತಾಯಿ ಮತ್ತು ಮಕ್ಕಳ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ತಿಪಟೂರಿನ ಜನರಿಗೆ ಅತ್ಯುತ್ತಮ NICU ವೈದ್ಯಕೀಯ ಸೇವೆ ನೀಡುತ್ತಿದೆ,ಸಂತಸದ ವಿಚಾರವಾಗಿದ್ದು ಬೆಂಗಳೂರು ಹಾಸನ ತುಮಕೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ದೊರೆಯುವ ಸೂಪರ್ ಸ್ಪೆಷಲಿಟಿ ಸೌಲಭ್ಯ ನಮ್ಮ ಆಸ್ಪತ್ರೆಯಲ್ಲಿ ದೊರೆಯುತ್ತಿದೆ ಎಂದು ವೈಭವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ//ಮಧುಸೂಧನ್ ತಿಳಿಸಿದರು


ನಗರದ ಆಸ್ಪತ್ರೆಯಲ್ಲಿ ವಾರ್ಷಿಕೋತ್ಸವ ಸಮಾರಂಭದ ಆಂಗವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಧುಸೂಧನ್ ಕೇರಳದಲ್ಲಿ ಸೇವೆಸಲ್ಲಿಸುತ್ತಿದ್ದ ನಾನು ನಮ್ಮ ಊರಿನಲ್ಲಿ ಸೇವೆಸಲ್ಲಿಸಬೇಕು ನಮ್ಮ ಊರಿನ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಎನ್ನುವ ಮಹಾದಾಸೆಯೊಂದಿಗೆ ತಿಪಟೂರಿನಲ್ಲಿ ವೈಭವಿ ಮಕ್ಕಳ ಆಸ್ಪತ್ರೆ ಆರಂಭಿಸಿದು, ಈಗ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ದೊರೆಯುವ ಸೂಪರ್ ಸ್ಪಷಾಲಿಟಿ ವೈದ್ಯಕೀಯ ಸೌಲಭ್ಯಗಳು ದೊರೆಯಬೇಕು ಎನ್ನುವ ಕಾರಣಕ್ಕೆ ಬೆಂಗಳೂರಿನ ಮದರ್ ಹುಡ್ ಆಸ್ಪತ್ರೆಯೊಂದಿಗೆ ಟೈಯಪ್ ಆಗಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ನೀಡಲಾಗುತ್ತಿದೆ,ನಮ್ಮ ವೈಭವಿ ಆಸ್ಪತ್ರೆ ,ವೈಭವಿ ತಾಯಿ ಮತ್ತು ಮಕ್ಕಳ ಸೂಪರ್ ಮಲ್ಟಿಸ್ಪೆಷಾಲಿಟಿ ಅಸ್ಪತ್ರೆಯಾಗಿ ಒಂದು ವರ್ಷ ಪೂರೈಸಿದ್ದು, ನಮ್ಮ ಆಸ್ಪತ್ರೆಯಲ್ಲಿ ನೂರಾರು ತೀವ್ರ ಆನಾರೋಗ್ಯದಿಂದ ಜೀವನ್ಮಾರಣದ ಹೋರಾಟದಲ್ಲಿದ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಿ ಆರೋಗ್ಯ ಸುಧಾರಿಸಿದ್ದು, ಉತ್ತಮ ಆರೋಗ್ಯವಂತರಾಗಿದ್ದು, ಪೋಷಕರಿಂದ ಶ್ಲಾಘನೆ ವ್ಯಕ್ತವಾಗಿದೆ.ನಮ್ಮಲ್ಲಿ NICUಸೌಲಭ್ಯಗಳು ದೊರೆಯುತ್ತವೆ,ಹೆರಿಗೆ ಸೌಲಭ್ಯ, ನಮಜಾತ ಶಿಶುಗಳ ಹಾರೈಕೆ,ನವಜಾತಶಿಶುಗಳ ಉಸಿರಾಟದ ತೊಂದರೆ,ಕೆಟ್ಟನೀರು ಹಾಗೂ ಮಲ ಕುಡಿದ ಮಕ್ಕಳಿಗೆ ಚಿಕಿತ್ಸೆ ಸೇರಿದಂತೆ.ನೀಡುತ್ತಿದು,ಮಕ್ಕಳ ಐಸಿಯು ಸೌಲಭ್ಯ ದೊರೆಯುತ್ತಿದೆ,ತಿಪಟೂರು ಸುತ್ತಮುತ್ತಲ ತಾಲ್ಲೂಕುಗಳಲ್ಲಿ ತೀವ್ರ ಆನಾರೋಗ್ಯಕ್ಕೊಳಗಾದ ನವಜಾತಶಿಶುಗಳ ,ಚಿಕಿತ್ಸೆಗಾಗಿ ಬೆಂಗಳೂರು,ಶಿವಮೊಗ್ಗ, ಹಾಸನ ತುಮಕೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಾಬೇಕಾಗಿತ್ತು, ಈ ಅವಧಿಯಲ್ಲಿ ಮಕ್ಕಳು,ಪ್ರಾಣಾಪಾಯ ಎದುರಿಸ ಬೇಕಾಗಿತ್ತು,ಆದರೆ ನಮ್ಮ ಆಸ್ಪತ್ರೆಯಲ್ಲಿ ಬೆಂಗಳೂರಿನ ಆಸ್ಪತ್ರೆಯ ಗುಣಮಟ್ಟದ ಸೂಪರ್ ಸ್ಪೆಷಾಲಿಟಿ ಸೌಲಭ್ಯ ದೊರೆಯುತ್ತಿರುವ ಕಾರಣ,ನೂರಾರು ಮಕ್ಕಳ ಜೀವ ಉಳಿಸಲು ಸಾಧ್ಯವಾಗಿದೆ.ನಮ್ಮ ಆಸ್ಪತ್ರೆಯಲ್ಲಿ 7ತಿಂಗಳಿಗೆ ಜನನವಾದ ಮಗು ಕೇವಲ 1ಕೆ.ಜಿ ತೂಕದ ಮಗುವಿಗೆ ಒಂದು ತಿಂಗಳ ಕಾಲ ಶೃಶ್ರೂಷೆ ಮಾಡಲಾಗಿದೆ,ಮಗು ಆರೋಗ್ಯವಾಗಿದ್ದು 4.5ಕೆ.ಜಿ ತೂಕವಿದೆ,ಇಂತಹ ಕಠಿಣ ಆರೋಗ್ಯ ಸಮಸ್ಯೆ ಇರುವ ಹಲವಾರು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ,ಸಾರ್ವಜನಿಕರಿಂದಲೂ ಉತ್ತಮ ಪ್ರಶಂಶೆ ವ್ಯಕ್ತವಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ಡಾ//ಕೃತಿಕ,ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ//ಹರ್ಷಿತಾ ಮುಂತ್ತಾದವರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version