KALPATHARU KRANTHI

ಹಾಲ್ಕುರಿಕೆ ಗ್ರಾಮದಲ್ಲಿ ಅಕ್ರಮ ಜೂಜು ಅಡ್ಡೆ ಮೇಲೆ ಹೊನ್ನವಳ್ಳಿ ಪೊಲೀಸರ ದಾಳಿ:ಜೂಜಿನಲ್ಲಿ ಪಣಕಿಟ್ಟಿದ್ದ ಹಣ ಹಾಗೂ ಆರೋಪಿಗಳ ಬಂಧನ

Spread the love

ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದ ಹೊರವಲಯದ ಗಂಗೇಬೈಲು ಶ್ರೀ ಜಕ್ಕೆಶ್ವರ ದೇವಾಲಯದ ಬಳಿ ಅಕ್ರಮವಾಗಿ ಗುಂಪುಕಟ್ಟಿಕೊಂಡಿ ಅಂದರ್ ಬಾಹಲ್ ಇಸ್ಪೀಟ್ ಆಡುತ್ತಿದ್ದ ಅಕ್ರಮ ಜೂಜು ಅಡ್ಡೆಯ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೊನ್ನವಳ್ಳಿ ಪೊಲಿಸ್ ಸಬ್ ಇನ್ಪೆಕ್ಟರ್ ರಾಜೇಶ್ ನೇತೃತ್ವದ ಇಸ್ಪೀಟ್ ಜೂಜಿನಲ್ಲಿ ತೊಡಗಿದ ಸುಮಾರು 4500 ರೂಪಾಯಿ ಹಣ ಹಾಗೂ ಇಸ್ಪೀಟ್ ಎಲೆಗಳು,ಮತ್ತು ಇತರೆ ವಸ್ತುಗಳನ್ನ ವಶಪಡಿಸಿಕೊಂಡಿದ್ದು,
ಇಸ್ಪೀಟ್ ನಲ್ಲಿ ತೊಡಗಿದ್ದ ಹಾಲ್ಕುರಿಕೆ ಗ್ರಾಮದ ಪ್ರದೀಪ್,ಕರಿಯಪ್ಪ.ಸಿರಾಜ್ ಅಹಮದ್,ಮಲ್ಲಿಕಾರ್ಜುನ್.ನಾಗರಾಜು,ಶಿವರಾಜ್,ಶಿವಪ್ಪ,ಗಂಗಧರ್ ನಾಯ್ಕ್ ಇತರರನ್ನ ಬಂಧಿಸಲಾಗಿದೆ.

ವರದಿ :ಮಂಜುನಾಥಗ ಹಾಲ್ಕುರಿಕೆ

Exit mobile version