KALPATHARU KRANTHI

ಬಾಡೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಪ್ರಯೋಗಕ್ಕೆ 10,000 ಬಹುಮಾನ

Spread the love

ಗುಬ್ಬಿ: ತಾಲೂಕಿನ ಕಡಬಾ ಹೋಬಳಿಯ ಬಾಡೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿಭಿನ್ನ ವಿಜ್ಞಾನದ ಉಷ್ಣ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಯೋಗಕ್ಕೆ ವಿದ್ಯಾರ್ಥಿಗಳು ಬಹುಮಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದರಿ ಶಾಲೆಯ ಸಹ ಶಿಕ್ಷಕಿ ಇಂದು ಶ್ರೀ ಮಾತನಾಡಿ ಇಂದಿನ ದಿನಮಾನಗಳಲ್ಲಿ ತ್ಯಾಜ್ಯಗಳ ನಿರ್ವಹಣೆಯ ಸಾಹಸವಾಗಿರುತ್ತದೆ, ನಮ್ಮ ಈ ಶಾಲೆಯ ಪ್ರಯೋಗವನ್ನು ದೊಡ್ಡ ಮಟ್ಟದಲ್ಲಿ ತ್ಯಾಜ್ಯಗಳನ್ನು ಉಪಯೋಗಿಸಿ ಬಳಸುವುದರಿಂದ ತ್ಯಾಜ್ಯದಿಂದ ವಿದ್ಯುತ್ತನ್ನು ಪರಿವರ್ತಿಸಬಹುದಾಗಿದೆ ಅಲ್ಲದೆ ಸೋಲಾರ್ ತಂತ್ರಜ್ಞಾನಕ್ಕಿಂತ ಆರ್ಥಿಕವಾಗಿ ಸಡಿಲ ವಾಗಿರುತ್ತದೆ ಇದರಿಂದ ತ್ಯಾಜ್ಯ ವಿಲೇವಾರಿ ಸುಧಾರಿಸಬಹುದಾಗಿದೆ ಎಂದರು ಶಾಲೆಯ ವಿದ್ಯಾರ್ಥಿ ದಿವ್ಯ ಮಾತನಾಡಿ ನಮ್ಮ ಶಾಲೆಯ ಶಿಕ್ಷಕರು ಈ ಪ್ರಯೋಗ ಮಾಡಲು ಮಾರ್ಗದರ್ಶನವನ್ನು ನೀಡಿದ್ದಾರೆ ತ್ಯಾಜ್ಯವನ್ನ ವಿದ್ಯುತ್ ತಯಾರಿಸಬಹುದು ಎಂಬ ವಿಷಯವನ್ನು ಈ ಪ್ರಯೋಗದಿಂದ ಕಲಿತಿದ್ದೇನೆ ಎಂದರು.

ವರದಿ: ಸಂತೋಷ್ ಓಬಳ. ಗುಬ್ಬಿ

Exit mobile version