
ಕಲ್ಪತರು ನಾಡು ತುಮಕೂರು ಜಿಲ್ಲೆ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಫೆಬ್ರವರಿ 13ಮತ್ತು 14.15.16 ರಂದು ಸ್ಪಂದನಾ ಕ್ರೀಡಾ ಮತ್ತು ಸಂಸ್ಕೃತಿಕ ಸಂಘದಿಂದ ರಾಷ್ಟ್ರೀಯ ಅಹ್ವಾನಿತ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್ ಚಾಂಪಿಯನ್ ಷಿಪ್ ಟೂರ್ನಿಮೆಂಟ್ ಆಯೋಜನೆ ಮಾಡಲಾಗಿದೆ
ನಗರದ ಕಾಸ್ಮೋಪಾಲಿಟನ್ ಕ್ಲಬ್ ಆವರಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಸ್ಪಂದನಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸದಸ್ಯ ನವೀನ್ ಕೆ.ಎಸ್ ಮಾತನಾಡಿ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಫೆಬ್ರವರಿ 13ಮತ್ತು 14.15.16 ರಂದು ರಾಷ್ಟ್ರೀಯ ಅಹ್ವಾನಿತ ವಾಲಿಬಾಲ್ ಚಾಂಪಿಯನ್ ಷಿಪ್ ಟೂರ್ನಿಮೆಂಟ್ ಆಯೋಜನೆ ಮಾಡಲಾಗಿದ್ದು, ತಿಪಟೂರು ಇತಿಹಾಸದಲ್ಲಿ ವಿಶೇಷ ಕಾರ್ಯಕ್ರಮವಾಗಿ ರೂಪುಗೊಳ್ಳಲಿದೆ, ಟೂರ್ನಿಮೆಂಟ್ ಗೆ ಭಾರತೀಯ ಆರ್ಮಿ ವಾಲಿಬಾಲ್ ತಂಡ. ಭಾರತೀಯ ವಾಯುಸೇನೆ ವಾಲಿಬಾಲ್ ತಂಡ, ನೌಕಾದಳದ ವಾಲಿಬಾಲ್ ತಂಡ, ಬಿಪಿಸಿಎಲ್ ವಾಲಿಬಾಲ್ ತಂಡ, ಕೆರಳ ಪೊಲೀಸ್ ವಾಲಿಬಾಲ್ ತಂಡ, ಸೇರಿದಂತೆ ಅನೇಕ ಪ್ರತಿಷ್ಟಿತ ವಾಲಿಬಾಲ್ ಮಹಿಳಾ ಮತ್ತು ಪುರುಷರ ತಂಡಗಳು ಭಾಗವಹಿಸಲಿದ್ದು, ರಾಷ್ಟ್ರೀಯ ಮಟ್ಟದ ಕ್ರೀಡಾಪುಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಕ್ರೀಡಾಪ್ರೇಮಿಗಳಿಗೆ ಕ್ರೀಡಾರಸದೌತ ನೀಡಲಿದ್ದಾರೆ. ನಗರದ ನಾಗರೀಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು
ಮಾಜಿ ನಗರಸಭಾ ಸದಸ್ಯ ಎಂ. ನಿಜಗುಣ ಮಾತನಾಡಿ ತಿಪಟೂರಿನ ಹಲವಾರು ಸಂಘಸಂಸ್ಥೆಗಳ ಸಹಯೋಗದಲ್ಲಿ ಸ್ಪಂದನಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ರಾಷ್ಟ್ರೀಯ ಮಹಿಳಾ ಮತ್ತು ಪುರುಷರ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ.ಕಾರ್ಯಕ್ರಮದ ಮೆರಗು ಹೆಚ್ಚಿಸುವ ದೃಷ್ಟಿಯಿಂದ ತಿಪಟೂರು ತಾಲ್ಲೋಕಿನ ಹಲವಾರು ಶಾಲಾ ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದು,ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ,ಕ್ರೀಡಾ ಮತ್ತು ಸಾಂಸ್ಕೃತಿಕ ಇಲಾಖೆ ಆಯುಕ್ತ ಚೇತನ್ ತಿಪಟೂರು ಶಾಸಕ ಕೆ.ಷಡಕ್ಷರಿ. ಮಾಜಿ ಸಚಿವ ಬಿ.ಸಿ ನಾಗೇಶ್. ಮಾಜಿ ಶಾಸಕ ಬಿ.ನಂಜಾಮರಿ.ರಾಷ್ಟ್ರೀಯ ಖೋ ಖೋ ಸಂಸ್ಥೆ ಉಪಾಧ್ಯಕ್ಷ ಲೋಕೇಶ್ವರ್, ಸೇರಿದಂತೆ ಅನೇಕ ಮುಖಂಡರು ಕ್ರೀಡಾಪಟುಗಳು ,ರಾಜಕೀಯನಾಯಕರು,ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಸ್ಪಂದನಾ ಸಂಸ್ಥೆ ಸದಸ್ಯ ಕೆ.ಎಸ್ ನವೀನ್ ಕುಮಾರ್,ತೋಂಟಾರಾಧ್ಯಕಾಸ್ಮೋ ಪಾಲಿಟನ್ ಕ್ಲಬ್ ,ಕಾರ್ಯದರ್ಶಿಎಂ.ಬಿ ಸಿದ್ದರಾಮಯ್ಯ ,ಕಿರಣ್.ನಗರಸಭಾ ಸದಸ್ಯ ಸಂಗಮೇಶ್,ಮುಖಂಡರಾದ ರೇಣು ಮಾದೀಹಳ್ಳಿ,ವಿಜಯ್ ಕುಮಾರ್,ಚಂದ್ರಶೇಖರ್ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ