KALPATHARU KRANTHI

ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ವರ್ಗಗಳ ಕುಂದುಕೊರತೆ ಸಭೆ,ಪರಿಶಿಷ್ಠ ದೌರ್ಜನ್ಯ ಪ್ರಕರಣದಲ್ಲಿ ಪ್ರತಿದೂರು ದಾಖಲಿಸದಂತೆ ಮುಖಂಡರ ಒತ್ತಾಯ.

Spread the love

ತುಮಕೂರು ಜಿಲ್ಲೆ ತುರುವೇಕೆರೆ ಪೊಲೀಸ್ ಠಾಣೆ ಆವರಣದಲ್ಲಿ ಕುಣಿಗಲ್ ಡಿವೈಎಸ್ಪಿ ಓಂಪ್ರಕಾಶ್ ಆಧ್ಯಕ್ಷತೆಯಲ್ಲಿ ಪರಿಶಿಷ್ಠ ಜಾತಿ ವರ್ಗಗಳ, ಕುಂದುಕೊರತೆ ಸಭೆ ನಡೆಸಲಾಯಿತು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ,ದಲಿತರ ಮೇಲೆ ದೌರ್ಜನ್ಯ ಮಾಡಿದ ವ್ಯಕ್ತಿಗಳಿಂದ ಪ್ರತಿದೂರು ಪಡೆದು,ಪ್ರಕರಣ ದಾಖಲಿಸುವ ಕೃತ್ಯಗಳು ನಡೆಯುತ್ತಿವೆ,ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳ ಮೇಲೆಯೇ ಕೇಸು ದಾಖಲಾದರೇ ಅವರ ಆತ್ಮಸ್ಥೈರ್ಯ ಕಡಿಮೆಯಾಗುತ್ತದೆ ಎಂದು ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಡಿವೈಎಸ್ಪಿ ಓಂಪ್ರಕಾಶ್ ಮಾತನಾಡಿ ಪೊಲೀಸ್ ಇಲಾಖೆ ಪರಿಶಿಷ್ಠ ಜಾತಿ ಹಾಗೂ ವರ್ಗಗಳ ರಕ್ಷಣೆ ವಿಚಾರದಲ್ಲಿ ಕಾನೂನು ವ್ಯಾಕ್ತಿಯಲ್ಲಿ ಸೂಕ್ತಕ್ರಮಗೈಗೊಂಡಿದೆ, ಪರಿಶಿಷ್ಠ ಜಾತಿ ವರ್ಗಗಳ ಮೇಲೆ ದೌರ್ಜನ್ಯಗಳು ನಡೆಯದಂತೆ ಕ್ರಮಕೈಗೊಳ್ಳಲಾಗುವುದು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಾಗರೀಕರ ಸಹಕಾರ ಅಗತ್ಯ, ಸಮಾಜದಲ್ಲಿ ಕಾನೂನು ವಿರೋದಿ ಕೃತ್ಯಗಳು ನಡೆದಾಗಿ,ಮಾಹಿತಿ ನೀಡಬೇಕು ಎಂದು ತಿಳಿಸಿದರು.
ತುರುವೇಕೆರೆ ಠಾಣೆ ವೃತ್ತ ನಿರೀಕ್ಷಕರಾದ ಲೋಹಿತ್ ಮಾತನಾಡಿ
ಪೊಲೀಸ್ ಇಲಾಖೆಯು ನಾಗರೀಕರ ಕಾನೂನು ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಸಂದರ್ಭದಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯಗಳು ನಡೆದರೆ ಕೂಡಲೇ ಸ್ಥಳೀಯ ಠಾಣೆಗೆ ನಿರ್ಭಯವಾಗಿ ಬಂದು ದೂರನ್ನು ನೀಡಿ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.ನಾವು ಕಾನೂನಾತ್ಮಕವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇವೆ. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತಮ್ಮ ಸಹಕಾರವು ಸಹಾ ಅತ್ಯಮೂಲ್ಯ ಎಂದು ತಿಳಿಸಿದರು.

ಸಭೆಯಲ್ಲಿ ತುರುವೇಕೆರೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಸಂಗಪ್ಪ ಮೇಟಿ, ಮೂರ್ತಿ ಮತ್ತು ದಂಡಿನ ಶಿವರ ಪೊಲೀಸ್ ಠಾಣೆಯ ಪಿಎಸ್ಐ ಚಿತ್ತರಂಜನ್, ಸಿಬ್ಬಂದಿಗಳಾದ ಎ.ಎಸ್. ಐ ಶಂಕರಪ್ಪ, ಮಂಜಣ್ಣ. , ಸೇರಿದಂತೆ ತಾಲೂಕಿನ ದಲಿತಪರ ಸಂಘಟನೆಗಳ ಮುಖಂಡರಾದ ಮೂರ್ತಿ, ಡೊಂಕಿಹಳ್ಳಿ ರಾಮಣ್ಣ, ಕೃಷ್ಣ ಮಾದರ್, ಹುಲ್ಲೇಕೆರೆ ಜಗದೀಶ್, ಬೀಚನಹಳ್ಳಿ ರಾಮಣ್ಣ, ಪುಟ್ಟರಾಜು, ರಾಯಣ್ಣ, ಮಹೇಶ್, ಚಂದ್ರಯ್ಯ, ಬೋರಪ್ಪ, ಮಂಜುನಾಥ್, ಹಟ್ಟಪ್ಪ, ಮುಂತಾದ ದಲಿತ ಮುಖಂಡರು ಉಪಸ್ಥಿತರಿದರು.

ವರದಿ : ಸಂಪಿಗೆ ಮೂರ್ತಿ

Exit mobile version