KALPATHARU KRANTHI

ಅರ್ಥಪೂರ್ಣವಾಗಿ ಜರುಗಿದ ಕೆ.ರಾಜಶೇಖರ್( ರಾಜುಭೈಯಾ)14ನೇ ವರ್ಷದ ಪುಣ್ಯಸ್ಮರಣೆ ಹಾಗೂ ಉಚಿತ ಆರೋಗ್ಯ ಶಿಭಿರ

Spread the love

ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಹಾಗೂ ಶಾಸಕ ಕೆ.ಷಡಕ್ಷರಿ ಸೋದರ ದಿವಂಗತ ಕೆ.ರಾಜಶೇಖರ್,(ರಾಜು ಬೈಯಾ) ರವರ 14ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನ ತಿಪಟೂರು ನಗರದ ಎಸ್,ಎನ್ ,ಎಸ್ ಕನ್ವೆಷನ್ ಹಾಲ್ ನಲ್ಲಿ ಕೆ.ರಾಜಶೇಖರ್ ಅಭಿಮಾನಿ ಬಳಗದಿಂದ ಬೃಹತ್ ಉಚಿತ ಆರೋಗ್ಯ ಶಿಭಿರ ಹಾಗೂ ರಕ್ತದಾನ ಶಿಬಿರ ಹಾಗೂ ಪೌರಕಾರ್ಮಿಕರಿಗೆ ಜರ್ಕಿನ್ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ತಿಪಟೂರು ಶಾಸಕ ಕೆ.ಷಡಕ್ಷರಿ ಯವರು ದಿವಂಗತ ಕೆ.ರಾಜಶೇಖರ್ ಹಾಗೂ ಕೆ.ಜಯಣ್ಣ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪುಣ್ಯಸ್ಮರಣೆ ಹಾಗೂ ಉಚಿತ ಆರೋಗ್ಯ ಶಿಭಿರಕ್ಕೆ ಚಾಲನೆ ನೀಡಿದರು
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ನನ್ನ ಸೋದರ ಕೆ.ರಾಜಶೇಖರ್ ಧಣಿವರಿಯದ ಜನ ನಾಯಕ, ತಮ್ಮ ಜೀವಿತಾವದಿಯುದ್ದಕ್ಕೂ ಜನಸೇವೆಯಲ್ಲಿ ಇದ್ದವರು,ದೀನ ದಲಿತರು, ಕಾರ್ಮಿಕರು,ಬಡವರ ಜನಸೇವೆ ಮೂಲಕ ಜನಮನಗೆದ್ದ ಜನ ಸೇವಕ, ಅವರ ನಿಧನ ನಮ್ಮ ಕುಟಂಬ ಅನುಯಾಯಿಗಳಿಗೆ ಅತೀವ ನೋವುಂಟು ಮಾಡಿದೆ.ಸದಾ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದ ರಾಜಶೇಖರ್ ,ಕಾರ್ಯವೈಖರಿ ನೋಡಿ ನಾನು ಮತ್ತು ನನ್ನ ತಂದೆ ಇಬ್ಬರು ಬೈಯುತ್ತಿದೆವು, ನಿನ್ನ ವಯುಕ್ತಿಕ ಕೆಲಸಗಳಿಗೆ ಆಧ್ಯತೆನೀಡುವಂತೆ ಹೇಳುತ್ತಿದ್ದೆವು, ಆದರೇ ದೇವರ ಇಚ್ಚೆಯಂತೆ ಅವರ ನಿಧನದ ದಿನ ಜನರ ಅರ್ಶೂತರ್ಪಣಾ ನೋಡಿ ಅವರ ಸೇವೆಯ ಮಹತ್ವ ಅರಿವಾಯಿತು,ಅವರ ಸೇವಾಕಾರ್ಯ ಮುಂದುವರೆಸಿ ,ರಾಜುಬೈಯ್ ಆತ್ಮಕ್ಕೆ ಶಾಂತಿಕೋರಬೇಕು ಎನ್ನುವ ದೃಷ್ಠಿಯಿಂದ ರಾಜುಬೈಯ್ ಅಭಿಮಾನಿಗಳು,ಪ್ರತಿವರ್ಷ ಪುಣ್ಯಸ್ಮರಣೆಯಂದು, ಆರೋಗ್ಯಶಿಭಿರ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಖ್ಯಾತವೈದ್ಯರಾದ ಡಾ//ಶ್ರೀಧರ್ ಮಾತನಾಡಿ ಕೆ.ರಾಜಶೇಖರ್ ಜನಸೇವೆಗೆ ತಮ್ಮ ಜೀವನ ಮುಡುಪಾಗಿಟ್ಟ ನಾಯಕ,ಹೆಚ್ಚು ಜನಸೇವೆ ಮಾಡಬೇಕು ಎನ್ನುವ ದೃಷ್ಠಿಯಿಂದ ಜಿಲ್ಲಾಪಂಚಾಯ್ತಿ ಚುನಾವಣೆಗೆ ಸ್ವರ್ಥಿಸಿ ಗೆದ್ದರು,ಆದರೇ ಅಧಿಕಾರ ಸ್ವೀಕರಿಸಿ ಜನರ ಸೇವೆ ಮಾಡುವ ಮೊದಲೇ ವಿಧಿಯಾಟದಂತೆ ದೈವಾಧೀನರಾದರು.ಅವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಭಿರ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಖ್ಯಾತವೈದ್ಯರಾದ ಡಾ//ಶ್ರೀಧರ್.ಡಾ//ವಿವೇಚನ್.ಮುಖಂಡರಾದ ಎಂ.ಆರ್ ಸಂಗಮೇಶ್.ತರಕಾರಿ ಪ್ರಕಾಶ್.ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎನ್ ಕಾಂತರಾಜು,ಬಜಗೂರು ಮಂಜುನಾಥ್.ಕೊಪ್ಪ ಶಾಂತಪ್ಪ ಗ್ರಾ.ಪಂ ಅಧ್ಯಕ್ಷ ಬಿ.ಬಿ ಬಸವರಾಜು ಧರಣೇಶ್ ಮಾದಿಹಳ್ಳಿ ರೇಣು ನಾಗರಾಜು ತರಕಾರಿ ಕಿಟ್ಟಿ ಕಿಟ್ಟಿಮಾಸ್ಟರ್ . ಶಿವರ ನಾಗರಾಜು.ಮುಂತ್ತಾದವರು ಉಪಸ್ಥಿತರಿದರು

ವರದಿ : ಮಂಜುನಾಥ್ ಹಾಲ್ಕುರಿಕೆ

Exit mobile version