
ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೊಕು ದಬ್ಬೆಘಟ್ಟ ಹೊಬಳಿ ಗೋಣಿ ತುಮಕೂರು ಗ್ರಾಮದ ಅರಣಸಮ್ಮ ದೇವಾಲಯ ಬಳಿ ಬೈಕ್ ಗೆ ಕೆ,ಎಸ್,ಆರ್,ಟಿ ಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ನಡೆದಿದೆ,
ತುರುವೇಕೆರೆ ಕದಬಳ್ಳಿ ಮಾರ್ಗದ ಕೆ.ಎಸ್ ಆರ್ ಟಿಸಿ. ಬಸ್ ಗೋಣಿ ತುಮಕೂರು ಬಳಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಡುಮಾರನಹಳ್ಳಿ ಗ್ರಾಮದ ದೀಪಕ್ ಹಾಗೂ ಪುಟ್ಟಸ್ವಾಮಿ ಅಪಘಾತದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ,
ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವರದಿ: ಸಂಪಿಗೆ ಮೂರ್ತಿ