
ತುರುವೇಕೆರೆ ತಾಲ್ಲೊಕು ಬಿಜೆಪಿ ಮಾಜಿ ಅಧ್ಯಕ್ಷ ದುಂಡ ರೇಣುಕಪ್ಪ ನಿಧನರಾದ ಹಿನ್ನಲೆ ತುರುವೇಕೆರೆ ತಾಲ್ಲೊಕು ಬಿಜೆಪಿ ವತಿಯಿಂದ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು.
ತುರುವೇಕೆರೆ ನಗರದ ಶ್ರೀಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಯೋಜಿಸಿದ ನುಡಿನಮನ ಕಾರ್ಯಕ್ರಮದಲ್ಲಿ ಮೃತ ರೇಣುಕಪ್ಪ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಮಾಜಿ ಶಾಸಕ ಎಂ.ಡಿ ಲಕ್ಷ್ಮಿನಾರಾಯಣ್ ಮಾತನಾಡಿ ದುಂಡ ರೇಣುಕಪ್ಪ ಹಾಗೂ ಬವರಾಜು ಗೆಳೆಯರು ಬಿಜೆಪಿ ಶಿಸ್ತಿನ ಸಿಪಾಯಿಗಳಾಗಿ ಕಟ್ಟಾಳುಗಳಂತೆ ಕೆಲಸ ಮಾಡಿದ್ದಾರೆ,ಅವರ ಅಕಾಲಿಕ ನಿಧನ ಪಕ್ಷಕ್ಕೆ ನಷ್ಟ ಉಂಟುಮಾಡಿದೆ,ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸೂಕ್ತವಾಗಿ ಸಂಘಟನೆ ಮಾಡಬಲ್ಲ ವ್ಯಕ್ತಿಯನ್ನ ಎಲ್ಲರೂ ಸೇರಿ ನೇಮಕ ಮಾಡಿ,ಪಕ್ಷದ ಸಂಘಟನೆಗೆ ಕೆಲಸ ಮಾಡೋಣ,ಬಿಜೆಪಿ ರಾಜ್ಯ ಹಾಗೂ ರಾಷ್ಟ್ರ ನಾಯಕ ಮಾರ್ಗದರ್ಶನದಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.
ಮಾಜಿ ಶಾಸಕ ಮಸಾಲೆ ಜಯರಾಮ್ ಮಾತನಾಡಿ ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಬೆಳೆದ ಪಕ್ಷ ತಾಲ್ಲೋಕಿನ ಪಕ್ಷ ಸಂಘಟನೆಗೆ ದುಂಡ ರೇಣುಕಪ್ಪ ,ಬಸವರಾಜುರ,ರಾಮೇಗೌಡ,ಚಂದ್ರಶೇಖರ್ ಶಿಸ್ತಿನಿಂದ ಕೆಲಸ ಮಾಡಿ,ಪಕ್ಷಕಟ್ಟುವಲ್ಲಿ ನೆರವಾಗಿದ್ದಾರೆ,ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಬಿಜೆಪಿ ವಕ್ತಾರ ಚಂದ್ರಶೇಖರ್ ,ಮುಖಂಡರಾದ ನಂಜೇಗೌಡ.ಮೂರ್ತಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದರು
ವರದಿ : ಸಂಪಿಗೆ ಮೂರ್ತಿ