
ರುರುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಕುಂದೂರು ಬಳಿ ವ್ಯಕ್ತಿಯೋರ್ವ ಬೈಕ್ ಸಮೇತ ಹೇಮಾವತಿ ನಾಲೆಗೆ ಬಿದ್ದಿರುವ ಬಗ್ಗೆ ಸ್ಥಳೀಯರು ಕೆ.ಬಿ ಕ್ರಾಸ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಕೆ.ಬಿ ಕ್ರಾಸ್ ಪೊಲೀಸರು ಹಾಗೂ ಅಗ್ನಿ ಶಾಮಕ ಠಾಣೆ ತಂಡ ನುರಿತ ಈಜುಗಾರರು ಹಾಗೂ ಬೋಟ್ ಸಹಾಯದಿಂದ ಶವಕ್ಕಾಗಿ ಹುಡುಕ್ಕಾಟ ನಡೆಸಿದ್ದರು, ಮೂರು ನಾಲ್ಕು ದಿನಗಳಾದರು ಶವ ಪತ್ತೆಯಾಗಿರುವುದಿಲ್ಲ, ಆದರೆ ಸೋಮಲಾಪುರ ಬಳಿ ಶವ ಪತ್ತೆಯಾಗಿದೆ.
ಅಜೀಬ್ ವುಲ್ಲಾ(33) ಖಾನ್ ಮೃತ ದುರ್ದೈವಿ. ಹೇಮಾವತಿ ನಾಲೆಯಿಂದ 28 ಕಿಲೋಮೀಟರ್ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ.
ಕುಂದೂರು ಬಳಿ ಹೇಮಾವತಿ ನಾಲೆಗೆ ಬಿದ್ದ ಅಜೀಬ್ ವುಲ್ಲಾ ಖಾನ್ ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್ ನಿವಾಸಿಯಾಗಿದ್ದಾರೆ. ಜ.2ನೇ ತಾರೀಕು ಅಜೀಬ್ ವುಲ್ಲಾ ನಾಲೆಗೆ ಬಿದ್ದಿದ್ದಾರೆ. ಕುಂದೂರು ಬಳಿಯ ನಾಲೆಯಲ್ಲೆ ಬೈಕ್ ಪತ್ತೆಯಾಗಿದೆ.
ಗುಬ್ಬಿ ತಾಲ್ಲೂಕಿನ ಸೋಮಲಾಪುರದ ಬಳಿ ಪತ್ತೆಯಾದ ಮೃತ ದೇಹ ಪತ್ತೆಯಾಗಿದೆ. ಮೃತ ದೇಹ ನಾಲೆಯಿಂದ ಹೊರ ತೆಗೆಯಲು ನಿನ್ನೆಯಿಂದ ಹರಸಾಹಸ ಪಡುವಂತಾಗಿದೆ. ನಿನ್ನೆಯೇ ಮೃತದೇಹ ನಾಲೆಯಲ್ಲಿ ಪತ್ತೆಯಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ