
ತಿಪಟೂರು ನಗರದ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಹಾಲ್ಕುರಿಕೆ ರಸ್ತೆ ರಾಷ್ಟ್ರೀಯ ಹೆದ್ದಾರಿ 206 ರ ಚತುಷ್ಪತ ರಸ್ತೆಗೆ ಸಂಪರ್ಕಿಸುವ 2ಕಿಲೋ ಮೀಟರ್ ಚತುಷ್ಪಥ ನಗರಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗೆ ತಿಪಟೂರು ಶಾಸಕ ಕೆ.ಷಡಕ್ಷರಿ ಗುದ್ದಲಿಪೂಜೆ ನೆರವೇರಿಸಿದರು
ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ ಶಾಸಕ ಕೆ.ಷಡಕ್ಷರಿ ಸರ್ಕಾರ ಎಸ್ಎಸ್ ಟಿಪಿ ಯೋಜನೆ ಅಡಿ 20 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು,ನಗರದ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಹಾಲ್ಕುರಿಕೆ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 8ಕೋಟಿ ವೆಚ್ಚದ ನಗರ ಸಂಪರ್ಕ ಚತುಷ್ಪಥ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿದ್ದು,ಶೀಘ್ರದಲ್ಲಿಯೇ ಕಾಮಗಾರಿ ಪ್ರರಂಭಿಸಲಾಗುವುದು. ಹಾಲ್ಕುರಿಕೆ ರಸ್ತೆ ರಾಜ್ಯ ಹೆದ್ದಾರಿಯಾಗಿರುವ ಕಾರಣ ರಾಜ್ಯಹೆದ್ದಾರಿ ನಿಯಮಗಳಂತೆ ಕಾಮಗಾರಿ ನಡೆಸಲಾಗುತ್ತದೆ. ಹಾಲ್ಕುರಿಕೆ ರಸ್ತೆ ನಗರದಿಂದ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯಾಗಿರುವ ಕಾರಣ,ಅಪಘಾತಗಳು ,ಹೆಚ್ಚಾದ ಹಿನ್ನೆಲೆ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಯಮುನಾ ಧರಣೇಶ್,ಉಪಾಧ್ಯಕ್ಷರಾದ ಶ್ರೀಮತಿ ಮೇಘನಾ ಭೂಷಣ್,ನಗರಸಭಾ ಸದಸ್ಯರಾದ ಯೋಗೇಶ್,ಪ್ರಕಾಶ್,ಶಶಿಕಿರಣ್ ಲೋಕನಾಥ್ ಸಿಂಗ್ ಮುಖಂಡರಾದ ವಗನಘಟ್ಟ ಯೋಗಾನಂದ್, ಗುತ್ತಿಗೆದಾರ ಮಧು,ನಟರಾಜ್.ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ