KALPATHARU KRANTHI

ಕರಡಿ ಗ್ರಾಮಪಂಚಾಯ್ತಿ ನೂತನ ಅಧ್ಯಕ್ಷರಾಗಿ ಗಾರೇ ಜಯಣ್ಣ ಅವಿರೋಧ ಆಯ್ಕೆ

Spread the love

ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಕರಡಿ ಗ್ರಾಮಪಂಚಾಯ್ತಿ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷ ಬೆಂಬಲಿ ಅಭ್ಯಾರ್ಥಿ ಅಣ್ಣೆಮಾರನಹಳ್ಳಿ ಗಾರೇ ಜಯಣ್ಣ ಅವಿರೋಧವಾಗಿ ಆಯ್ಕೆಯಾದರು.

15ಸದಸ್ಯ ಬಲದ ಕರಡಿ ಗ್ರಾಮಪಂಚಾಯ್ತಿಯಲ್ಲಿ ಅಧ್ಯಕ್ಷರಾಗಿದ ಜಯಂತಿ ಗ್ರಾಮದ ಗಂಗಮ್ಮ ನವರ ರಾಜೀನಾಮೆಯಿಂದ ತೆರವಾಗಿದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಅಣ್ಣೇ ಮಾರನಹಳ್ಳಿ ಗಾರೇ ಜಯಣ್ಣ ಅವಿರೋಧವಾಗಿ ಆಯ್ಕೆಯಾದರು

ಚುನಾವಣಾಧಿಕಾರಿಗಳಾಗಿ ತಿಪಟೂರು ತಹಸೀಲ್ದಾರ್ ಪವನ್ ಕುಮಾರ್ ಕರ್ತವ್ಯ ನಿರ್ವಹಿಸಿ, ವಿಜೇತ ಅಭ್ಯಾರ್ಥಿ ಘೋಷಣೆ ಮಾಡಿದರು.

ಮಾಜಿ ತಾಲ್ಲೋಕು ಪಂಚಾಯ್ತಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್.ಕರಡಿ ಗ್ರಾಮಪಂಚಾಯ್ತಿ ಸದಸ್ಯ ಮುನಿರಾಜು,ಹರ್ಷ,ಗಂಗಮ್ಮ,ಶ್ರೀನಿವಾಸ್ ಮುಂತ್ತಾದವರು ಉಪಸ್ಥಿತರಿದು, ನೂತನ ಅಧ್ಯಕ್ಷರನ್ನ ಅಭಿನಂದಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version