
ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ ಮಹಿಳೆ ಹೆರಿಗೆ ನಂತರ ಕೆಮ್ಮು ಉಲ್ಬಣಗೊಂಡು ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.
ತಿಪಟೂರು ಗಾಂಧಿನಗರದ ನಿವಾಸಿ ಪಾಷ ಜಾನ್ ಪುತ್ರಿ ಸುಮಾರು 27 ವರ್ಷ ವಯಸ್ಸಿನ ಪಿರ್ದೊಷ್ ಮೃತದುರ್ದೈವಿ ಎನ್ನಲಾಗಿದೆ.
ತಿಪಟೂರು ಮಹಿಳೆಯನ್ನ ಕೆ.ಜೆಹಳ್ಳಿಗೆ ಕೊಟ್ಟು ಮದುವೆ ಮಾಡಲಾಗಿತ್ತು, ಮೃತ ಮಹಿಳೆಗೆ 5ವರ್ಷ ಹೆಣ್ಣು ಮಗುವಿದ್ದು,2ನೇ ಹೆರಿಗೆಗೆ ಬಾಣಂತಿತನಕ್ಕಾಗಿ ತಿಪಟೂರಿಗೆ ಬಂದಿದ ಮಹಿಳೆಯನ್ನ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಿಸಿದರೂ, ಹೊಟ್ಟೆನೋವು ಜಾಸ್ತಿಯಾದ ಕಾರಣ, ಸರ್ಕಾರಿ ವೈದ್ಯರು ಸಿಜರಿಯನ್ ಹೆರಿಗೆ ಮಾಡುವುದಾಗಿ, ಮಹಿಳೆ ಪೋಷಕರಿಗೆ ತಿಳಿಸಿದ್ದಾರೆ, ಪೋಷಕರ ಅನುಮತಿಯಂತೆ,ಮಹಿಳೆಗೆ ಸಿಜರಿಯನ್ ಅಪರೇಷನ್ ಮಾಡಿ ಹೆರಿಗೆ ಮಾಡಿಸಲಾಗಿದ್ದು, ತಾಯಿ ಮಗು ಆರೋಗ್ಯವಾಗಿದರು, ಆದರೇ ರಾತ್ರಿ ಕೆಮ್ಮ ಆರಂಬವಾಗಿ ಶ್ವಾಶಕೋಶದ ತೊಂದರೆಯಿಂದ ಮಹಿಳೆ ಸಾವನ್ನಪಿದ್ದಾರೆ, ಮಗು ಆರೋಗ್ಯವಾಗಿದೆ.
ವರದಿ:ಮಂಜುನಾಥ್ ಹಾಲ್ಕುರಿಕೆ
ಜಾಹಿರಾತು