
ತುಮಕೂರು ಜಿಲ್ಲೆ ತಿಪಟೂರು ನಗರದ ನಗರಸಭೆ ವಾರ್ಡ್ ನಂಬರ್ 04ರ ರೈಲ್ವೆ ಸ್ಟೇಷನ್ ರಸ್ತೆ ನಗರಸಭೆಗೆ ಸೇರಿದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ನಿವೇಷನದಲ್ಲಿ ಖಾಸಗೀ ವ್ಯಕ್ತಿಗಳು ಏಕಾಏಕಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಕೋಟ್ಯಾಂತರ ಮೌಲ್ಯದ ನಗರಸಭೆ ಆಸ್ತಿ ಕಂಡವರ ಪಾಲಾಗುತ್ತಿದ್ದು ನಗರಸಭೆ ತನ್ನ ಆಸ್ತಿ ಕಾಪಾಡಿಕೊಳ್ಳ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ನಗರದ ನಗರಸಭೆ ವಾರ್ಡ್ ನಂಬರ್ 04ರ ರೈಲ್ವೆ ಸ್ಟೇಷನ್ ರಸ್ತೆ ನಗರಸಭೆಗೆ ಸೇರಿದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ನಿವೇಷನದಲ್ಲಿ ಖಾಸಗೀ ವ್ಯಕ್ತಿಗಳು ಏಕಾಏಕಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಕೋಟ್ಯಾಂತರ ಮೌಲ್ಯದ ನಗರಸಭೆ ಆಸ್ತಿ ಕಂಡವರ ಪಾಲಾಗುತ್ತಿದೆ,
ತಿಪಟೂರು ನಗರದ ವಾರ್ಡ್ ನಂಬರ್ 04ರಲ್ಲಿನಗರಸಭೆಗೆ ಸೇರಿದ ಅಸೆಸ್ಮೆಂಟ್ 894 ರ ವಿಸ್ತೀರ್ಣ 57×27 ಮತ್ತು 12×17 ಸ್ವತ್ತುಗಳು 1985-1986 ನೇ ಸಾಲು ಮುನ್ಸಿಪಲ್ ಲ್ಯಾಂಡ್ ಎಂದು ಮನೆ ಹಾಗೂ ಜಮೀನುತೆರಿಗೆಗಳು ನಿರ್ಧರಣಾ ಪಟ್ಟಿ ನಮೂನೆ -19ಮುನ್ಸಿಪಲ್ ಲ್ಯಾಂಡ್ ಎಂದು ನಮೂದಾಗಿರುತ್ತದೆ, ಆದರೂ ಸಹ ಖಾಸಗೀ ವ್ಯಕ್ತಿಯೊಬ್ಬರು ತಾತ್ಕಾಲಿಕ ಷೆಡ್ ನಿರ್ಮಿಸಿಕೊಂಡು ರೆಗ್ಜಿನ್ ಟೈಲರಿಂಗ್ ಶಾಪ್ ನಡೆಸುತ್ತಿದ್ದರು, ಈ ಬಗ್ಗೆ ದಿನಾಂಕ 08.12.2011ರಂದು ನಗರಸಭೆ ಪೌರಾಯುಕ್ತರಾಗಿದ ವೆಂಕಟೇಶಯ್ಯ ನಗರಸಭೆ ಜಾಗದಲ್ಲಿ ಅನಾಧೀಕೃತ ಷೆಡ್ ತೆರವುಗೊಳಿಸುವಂತೆ ನೋಟಿಸ್ ಸಹ ನೀಡಿದ್ದಾರೆ, ಆದರೂ ಸಹ ಖಾಸಗೀ ವ್ಯಕ್ತಿಗಳು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸ್ವತ್ತಿನ ಮೇಲೆ ಕಣ್ಣುಹಾಕಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಮುಂದಾಗಿದ್ದು,ನಗರಸಭೆ ಕೂಡಲೇ ಅನಾಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಕ್ರಮಕೈಗೊಂಡು, ನಗರಸಭೆ ಸ್ವತ್ತು ಎಂಬುದಾಗಿ ನಾಮಫಲಕ ಅಳವಡಿಸಬೇಕು ಎಂದು ಮಾಜಿ ನಗರಸಭಾ ಅಧ್ಯಕ್ಷ ರಾಮ್ ಮೋಹನ್,ಮಾಜಿ ಉಪಾಧ್ಯಕ್ಷ ಸೊಪ್ಪುಗಣೇಶ್,ಸದಸ್ಯರಾದ ಶಶಿಕಿರಣ್ , ಮೋಹನ್ ಕುಮಾರ್, ಜಯಲಕ್ಷ್ಮಿ, ಭಾರತಿ ಮಂಜುನಾಥ್.ಲತಾಲೋಕೇಶ್. ಪದ್ಮತಿಮ್ಮೇಗೌಡ,ಸಂಧ್ಯಾಕಿರಣ್,
ಪ್ರಸನ್ನ ಕುಮಾರ್.ರವರು ನಗರಸಭೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸ್ವತ್ತು ಖಾಸಗೀಯವರ ಪಾಲಾಗದಂತೆ ಕ್ರಮಕೈಗೊಳ್ಳ ಬೇಕು ಎಂದು ನಗರಸಭೆ ಪೌರಾಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ, ನಗರಸಭೆ ತನ್ನ ಸ್ವತ್ತನು ರಕ್ಷಣೆ ಮಾಡಿಕೊಳ್ಳ ಬೇಕು ಎಂದು ಒತ್ತಾಯಿಸಿದ್ದಾರೆ
ವರದಿ:ಮಂಜುನಾಥ್ ಹಾಲ್ಕುರಿಕೆ