KALPATHARU KRANTHI

ಪ್ರಜಾ ಪ್ರಭುತ್ವ ತಾಯಿ ಧರ್ಮದಲ್ಲಿ ಅಸಮಾನತೆ ಮೂಡುತ್ತಿದೆ ಸಮ್ಮೇಳನದಲ್ಲಿ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಕಳವಳ

{"capture_mode":"AutoModule","faces":[]}

{"capture_mode":"AutoModule","faces":[]}

Spread the love

ತಿಪಟೂರು: ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ಲಿಂಗ ಧರ್ಮ ಊರು ಕೇರಿ ಕಪ್ಪು ಬಿಳಿ ಬಡವರು ಶ್ರೀಮಂತರು ಮೇಲು ಕೀಳು ಚಿಕ್ಕದು ದೊಡ್ಡದು ಇತ್ಯಾದಿಯಾಗಿ ಛಿದ್ರಗೊಂಡು ಬದುಕುತ್ತಿದ್ದೇವೆ ಇವುಗಳಿಂದ ಮುಕ್ತಿ ಪಡೆಯಲು ನಾವು ಬಸವಣ್ಣನಗಳ ಶರೀಫರುಗಳು ಬುದ್ದರುಗಳ, ಕುವೆಂಪು ಬೇಂದ್ರೆಗಳ, ಲೋಹಿಯಾ ಅಂಬೇಡ್ಕರ್ ಗಳು ಅಕ್ಕ, ಸಿಮೋನ್ ದಿ ಬುವಾಗಳ, ತತ್ವಪದಕಾರರುಗಳ, ಸೂಫಿ ಸಂತರುಗಳ, ಸರ್ವಜ್ಞರುಗಳ ಇಂಥ ಸಾವಿರಾರು ವರ್ಷ ಆಯುಷ್ಯಳ್ಳ ಜೀವಿಗಳ ದನಿಗಳನ್ನು ಎದೆಗೂಡುಗಳಲ್ಲಿ ಕಾಪಾಡಿಕೂಳ್ಳಬೇಕು ಎಂದು ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿದರು. ನಗರದ ಕಿಬ್ಬನಹಳ್ಳಿ ಕ್ರಾಸ್ ಬಳಿ ಆಯೋಜಿಸಿದ್ದ ೬ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ವಹಿಸಿ ಮಾತನಾಡಿದರು, ನಾನು ಹುಟ್ಟಿ ಬೆಳೆದ ಊರು ಬಿಳಿಗೆರೆ ಇಲ್ಲಿಯೇ ನನ್ನ ಜೀವಿತಿದ ಬಹು ದಿನಗಳನ್ನು ಕಳೆದಿರುವೆ ಇಲ್ಲಿನ ಜನ, ಗಾಳಿ, ನೀರು ಅನ್ನಗಳ ಋಣದಲ್ಲಿ ಬದುಕುತ್ತಾ ಬಂದಿರುವೆ ಇಲ್ಲಿ ನನ್ನ ಬದುಕು ಬೆಳೆಯಲು ಅಕ್ಷರಗಳು ನನ್ನೊಳಗೆ ಹುಟ್ಟಿ ಇಳಿಯಲು, ಹಾಡುಗಳಾಗಿಯೋ, ಪಾಡುಗಳಾಗಿಯೋ, ಸಾಹಿತ್ಯವಾಗಿಯೋ, ಪಾಠಗಳಾಗಿಯೋ ರೂಪ ಪಡೆಯಲು ಎಷ್ಟೊಂದು ಜನ ಕಾರಣರಾಗಿದ್ದಾರೆ ಆ ಎಲ್ಲರನ್ನೂ ಪ್ರೀತಿಯಿಂದ ನೆನೆಯುತ್ತೇನೆ ಎಂದರು ಇಂದು ರಾಷ್ಟ್ರ ಕವಿ ಬಿರುದುಗಳು ಜಾತಿ ಆಧಾರಿತವಾಗಿದೆ ಶೂದ್ರ ಕವಿಗಳನ್ನು , ಶೂದ್ರ ಧರ್ಮವನ್ನು ಕಡೆಗಾಣಿಸಲಾಗುತ್ತಿದೆ, ಭೂಮಿ, ಅಧಿಕಾರಿ, ನೀರು ಸಮಾನವಾಗಿ ಹಂಚಕಿಯಾಗಿಲ್ಲ ಹೀಗೆ ಪ್ರಜಾಪ್ರಭುತ್ವ ಮಹಾ ತಾಯಿ ಧರ್ಮದಲ್ಲಿ ಅಸಮಾನತೆ ಮೂಡಿಸಲಾಗುತ್ತಿದೆ. ತಿಪಟೂರು ತಾಲ್ಲೂಕು ಕಲ್ಪತರ ನಾಡು ಎಂದು ಹೇಳುತ್ತೇವೆ ೧ ವರ್ಷ ಹೇಮಾವತಿ ನೀರು ಹಾಗೂ ಕೊಳವೆ ಬಾವಿಗಳಲ್ಲಿ ನೀರು ಬಾರದೆ ಹೋದರೆ ಕಲ್ಪತರು ನಾಡು ಬತ್ತುದೆ ತೆಂಗಿನ ಮರಕ್ಕೆ 85 ರೋಗಗಳು ತುತ್ತಾಗಿದೆ ಇದಕ್ಕೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೂಳ್ಳಬೇಕು ಎಂದು ಕಳವಳ ವ್ಯಕ್ತಪಡಿಸಿದರು, ಬುದ್ಧಿ ಹೆಚ್ಚಾಗುತ್ತಿದೆ ವಿವೇಕ ಮರೆಮಾಚುತ್ತಿದೆ ಕರ್ನಾಟಕದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆ ಎಂಬ ಭಿನ್ನ ಭೇದಗಳ ನಡುವೆ ಇಕ್ಕಟ್ಟಿಗೆ ಸಿಕ್ಕಿರುವ ಕರ್ನಾಟಕದ ದುಡಿಯುವ ವರ್ಗಗಳನ್ನು ಈ ಇಕ್ಕಟ್ಟಿನಿಂದ ಬಿಡಿಸಿ ಅವರ ಮಕ್ಕಳು ಎಲ್ಲರಂತೆ ಸ್ವಾಭಿಮಾನದಿಂದ ಶಿಕ್ಷಣ ಪಡೆಯುವಂತಾಗಬೇಕು ವಿವೇಕಿಗಳಿಗೆಲ್ಲಾ ಕಣ್ಣಿಗೆ ರಾಚುತ್ತಿರುವ ಕಾರಣಗಳಿಂದಾಗಿ, ಮುಳುಗುತ್ತಿರುವ, ಸೋಲುತ್ತಿರುವ ಬಡವಾಗುತ್ತಿರು ಬಡವರ ಸರ್ಕಾರಿ ಶಾಲೆಗಳಿಗೆ ತಕ್ಷಣವೇ ಕಾಯಕಲ್ಪ ಒದಗಿಸಿ ಉಳಿಸಿಕೊಳ್ಳುತಿದ್ದರೇ, ಸರ್ಕಾರಗಳು ಕೊಡುತ್ತಿರುವ ಯಾವ ಸವಲತ್ತುಗಳಿಗೂ ಬೆಲೆ ಇಲ್ಲದಂತಾಗುತ್ತದೆ , ಇದರಿಂದ ಕನ್ನಡ ಸಾಹಿತ್ಯ ಭಾಷೆ ಬಡವಾಗುತ್ತದೆ ಇದಕ್ಕೆ ಅವಕಾಶ ಕೊಡಕೂಡದು ಎಂದು ಮಾತನಾಡಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಷಡಕ್ಷರಿ ಎತ್ತಿನಹೊಳೆ ಹಾಗೂ ಹೇಮಾವತಿ ನೀರನ್ನು ಬಲಪಡಿಸಲು ಶ್ರಮ ವಹಿಸಿದ್ದೇನೆ, ಯಾವುದೇ ಕಾರಣಕ್ಕೂ ತಿಪಟೂರನ್ನು ಬರಡಾಗಲು ಬಿಡುವುದಿಲ್ಲ ಕಲ್ಪತರ ನಾಡಗೇ ಉಳಿಯುತ್ತದೆ ಎಂದರು, ಸಾಹಿತ್ಯ ಉಳಿಯಲು ಬೆಳೆಯಲು ಅರಿವು ಮೂಡಿಸುವ ಇಂತಹ ಸಮ್ಮೇಳನಗಳು ಸಹಕಾರಿ, ಕನ್ನಡ ಶಾಲೆಗಳು ಉಳಿಯಲು ಮಕ್ಕಳಿಗೆ ಶ್ರದ್ಧೆ ಮತ್ತು ಪೋಷಕರಲ್ಲಿ ಕನ್ನಡ ಶಾಲೆಗೆ ಕಳುಹಿಸುವ ಆಸಕ್ತಿ ಮೂಡಿಸಬೇಕು ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮಾತನಾಡಿ ಸಮ್ಮೇಳನ ವೆಂದರೆ ತಿಳಿಸುದರ ಜೂತೆಗೆ ಕಲಿಸುವುದು ಹೌದು ನಾಲ್ಕೈದು ಜಿಲ್ಲೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳು ತಿಪಟೂರು ತಾಲ್ಲೂಕಿನಲ್ಲಿ ನಡೆಯುತ್ತಿದೆ ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ತಾಗಬೇಕು ಜನಸಾಮಾನ್ಯರ ಶಕ್ತಿಯಿಂದ ಪರಿಷತ್ತಿಗೆ ಶಕ್ತಿ ಬಂದಿದೆ ಎಂದರೆ ಕನ್ನಡ ಭಾಷೆಯನ್ನು ಸೌಲಭ್ಯಗಳಿಗೆ ಅಷ್ಟೇ ಬಳಸಲಾಗುತ್ತಿದೆ ಎಂದು ಕನ್ನಡ ಭಾಷೆಗೆ ಜೀರ್ಣ ಶಕ್ತಿ ಚೆನ್ನಾಗಿ ಇದೆ ಎಷ್ಟು ಇಂಗ್ಲಿಷ್ ಪದಗಳನ್ನು ಕನ್ನಡದಲ್ಲಿ ಹಾಸುಹೊಕ್ಕಾಗಿದೆ, ಕನ್ನಡ ಭಾಷೆ ಬೆಳೆಯಲು ಸರ್ಕಾರದ ಎಲ್ಲ ಅಂಗಗಳಲ್ಲಿ ಕನ್ನಡ ಕಡ್ಡಾಯವಾಗ ಬೇಕು ಎಂದರು.

ವರದಿ: ಸಂತೋಷ್ ಓಬಳ. ಗುಬ್ಬಿ

Exit mobile version