
ತಿಪಟೂರು ನಗರದ ಶ್ರೀಕಲ್ಲೇಶ್ವರ ಸ್ವಾಮಿದೇವಾಲಯದ ಆವರಣದಲ್ಲಿ ಶ್ರೀಗುರುದತ್ತಾತ್ರೇಯ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲಾಯಿತು.ಶ್ರೀಗುರು ದತ್ತಜಯಂತಿ ಅಂಗವಾಗಿ ಶ್ರೀ ದತ್ತಾತ್ರೇಯ ಹೋಮ ಹವನ, ಹಾಗೂ ವಿಶೇಷ ಪೂಜೆ.ಮತ್ತು ಭಜನಾ ಕಾರ್ಯಕ್ರಮ ನೆರವೇರಿಸಲಾಯಿತು
ಬೆಳಗ್ಗೆಯಿಂದ ಆರಂಭವಾದ ಪೂಜಾಕೈಂಕರ್ಯಗಳು ಹೋಮ ಹವನಗಳನ್ನ ನೆರವೇರಿಸಿ,ನಿರಂತರ ಅನ್ನ ಸಂತರ್ಪಣೆ ನೆರವೇರಿಸಲಾಯಿತು.ನಂತರ ದತ್ತಮಾಲೆಧರಿಸಿದ ನೂರಾರು ಭಕ್ತರು,ಶೋಭಾಯಾತ್ರೆ ನಡೆಸಿ, ಚಿಕ್ಕಮಂಗಳೂರು ಜಿಲ್ಲೆ ಚಂದ್ರದ್ರೋಣಪರ್ವತದ ದತ್ತಾತ್ರೇಯ ದೇವಾಲಯಕ್ಕೆ ತೆರಳಿದರು.
ಬಿಜೆಪಿ ಮುಖಂಡ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್. ಮುಖಂಡರಾದ ವಿನಯ್ ಕುಮಾರ್ ಹಳಿಕಾರ್ ಮಡೇನೂರು, ಭಜರಂಗದಳ ಮುಖಂಡ ಕೃಷ್ಣ,ಮಲ್ಲಿಕಾರ್ಜುನ್.ಮಾಜಿ ನಗರಸಭಾ ಉಪಾಧ್ಯಕ್ಷ ಸೊಪ್ಪು ಗಣೇಶ್ ಮುಂತ್ತಾದವರು ಭೇಟಿ ನೀಡಿ ಪೂಜೆಸಲ್ಲಿಸಿದರು
ವರದಿ:ಮಂಜುನಾಥ್ ಹಾಲ್ಕುರಿಕೆ