KALPATHARU KRANTHI

ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಆಸರೆಯಾದ ಶಿಕ್ಷಕ

ಕಾರ್ಯಕ್ರಮದಲ್ಲಿ ವೀರೇಶ ಕಾಜಗಾರ,ಮಲ್ಲು ತಳವಾರ,ಶಿವಾನಂದ ವಾಲಿ,ಸಂಗಪ್ಪ ಸುಲ್ತಾನಪೂರ,ಜಗದೀಶ ಪತ್ತಾರ, ಮೌನೇಶ ನಾಗಬೇನಾಳ ಭೀಮಣ್ಣ ರಕ್ಕಸಗಿ ಇತರರು ಭಾಗಿ ಯಾಗಿದ್ದರು

Spread the love

ಮುದ್ದೇಬಿಹಾಳ: ತಾಲ್ಲೂಕಿನ ನಾಗಬೇನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮೋಹನ ಬಾಬು ರವರು ಇತ್ತೀಚಿನ ರಾಜ್ಯ ಸರ್ಕಾರದ ಪದವೀಧರ ಶಿಕ್ಷಕ ನೇಮಕಾತಿಯಲ್ಲಿ ಸದರಿ ಶಾಲೆಗೆ ಆಯ್ಕೆಗೊಂಡ ಮೂರೇ ತಿಂಗಳಲ್ಲಿ ಊರಿನ ಗ್ರಾಮಸ್ಥರಿಗೆ ಹಾಗೂ ಮಕ್ಕಳಿಗೆ ಅಚ್ಚು ಮೆಚ್ಚಾಗಿದ್ದಾರೆ ಏಕೆಂದರೆ ಶಾಲೆಗೆ ಸ್ವಂತ ಹಣದಿಂದ ಸುಣ್ಣ ಬಣ್ಣ,ಕಿಡಕಿ ರೀಪೇರಿ ಲೈಟಿಂಗ್ ವ್ಯವಸ್ಥೆ,ಶಾಲಾ ಕೋಣೆಗೆ ಎರಡೆರಡು ಪ್ಯಾನ್ ವ್ಯವಸ್ಥೆ ಇನ್ನು ಮುಂತಾದ ಅಭಿವೃದ್ಧಿ ಕೆಲಸಗಳನ್ನು ಮಾಡಿ ಮಕ್ಕಳಿಗೆ ಹಾಗೂ ನಾಗಬೇನಾಳ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿ, ಅವನತಿ ಹೊಂದಿತ್ತಿರುವ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪುಟ್ಟ ಆಸರೆಯಾಗುವ ಮೂಲಕ ಶಿಕ್ಷಕರಿಗೆ, ಪೋಷಕರಿಗೆ ಹಾಗೂ ಮಕ್ಕಳಿಗೆ ಸ್ಪೂರ್ತಿಯಾಗುತ್ತಿದ್ದಾರೆ, ಕಾರ್ಯಕ್ರಮದಲ್ಲಿ ಮಾತನಾಡಿದ ಕಾಯಕದಲ್ಲಿ ನಿರತರಾಗಿರುವರು ಎಲ್ಲವನ್ನೂ ಮರೆಯುತ್ತಾರೆ ಹಾಗೆಯೇ ನಮ್ಮ ಶಾಲೆಯ ಶಿಕ್ಷಕ ತಮ್ಮ ತನು ಮನ ಧನ ದಿಂದ ಶಾಲೆಯ ಅಭಿವೃದ್ಧಿಯಲ್ಲಿ ನಿರತರಾಗಿದ್ದಾರೆ ಎಂದರು, ಮತ್ತೊಬ್ಬರು ಮಾತನಾಡಿ ಒಬ್ಬ ಒಬ್ಬ ಉತ್ತಮ ಶಿಕ್ಷಕರನ್ನು ಗುಡಿ ಕಟ್ಟಿಸಿ ಗೌರವಿಸುವ ಜನ ನಮ್ಮ ತಾಲ್ಲೂಕಿನಲ್ಲಿದ್ದಾರೆ ಈ ಹಿಂದೆ ಸದರಿ ಶಾಲೆಯ ಬೆಳವಣಿಗೆ ನಕಾರಾತ್ಮಕ ಭಾವನೆ ಇತ್ತು ಇಂದು ನಮ್ಮ ಈ ಶಿಕ್ಷಕನಿಂದ ಅಭಿವೃದ್ಧಿಗೆ ಬದಲಾಗುತ್ತಿದೆ ಎಂದರು.ಗ್ರಾಮಸ್ಥರು ಹಾಗೂ ಪ್ರಗತಿಪರ,ರೈತಪರ,ದಲಿತಪರ ಸಂಘಟನೆಯ ಒಕ್ಕೂಟದಲ್ಲಿ ನಾಗಬೇನಾಳ ಗ್ರಾಮದ ಶಾಲೆಯ ಶಿಕ್ಷಕರಾದ ಮೋಹನ ಬಾಬು ಅವರಿಗೆ ಸನ್ಮಾನಿಸಲಾಯಿತುಈ ವೇಳೆಯಲ್ಲಿ ವೀರೇಶ ಕಾಜಗಾರ,ಮಲ್ಲು ತಳವಾರ,ಶಿವಾನಂದ ವಾಲಿ,ಸಂಗಪ್ಪ ಸುಲ್ತಾನಪೂರ,ಜಗದೀಶ ಪತ್ತಾರ, ಮೌನೇಶ ನಾಗಬೇನಾಳ ಭೀಮಣ್ಣ ರಕ್ಕಸಗಿ ಇತರರು ಭಾಗಿ ಯಾಗಿದ್ದರು

ವರದಿ: ಸಂತೋಷ್ ಓಬಳ. ಗುಬ್ಬಿ

Exit mobile version