KALPATHARU KRANTHI

ಡಿಸೆಂಬರ್ 14 ರಂದು ಕೆ.ಬಿ ಕ್ರಾಸ್ ನಲ್ಲಿ ತಾಲ್ಲೋಕು ಕನ್ನಡ ಸಾಹಿತ್ಯ ಸಮ್ಮೇಳನ.

Spread the love

ತಿಪಟೂರು ತಾಲ್ಲೋಕಿನ ಕೆ.ಬಿ ಕ್ರಾಸ್ ಶ್ರೀಮದ್ ರಂಬಾಪುರಿ ಪ್ರೌಡ ಶಾಲಾ ಆವರದಲ್ಲಿ ಅದ್ದೂರಿಯಾಗಿ 6ನೇ ತಾಲ್ಲೋಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು.ಸಮ್ಮೆಳನಕ್ಕೆ ಸಕಲಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಪಟೂರು ಕನ್ನಡಸಾಹಿತ್ಯ ಪರೀಷತ್ ಅಧ್ಯಕ್ಷ ಬಸವರಾಜಪ್ಪ ತಿಳಿಸಿದರು

ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರೀಷತ್ ಅಧ್ಯಕ್ಷ ಬಸವರಾಜಪ್ಪ,ತಿಪಟೂರು ತಾಲ್ಲೋಕು ಕನ್ನಡ ಸಾಹಿತ್ಯ ಸಮ್ಮೇಳನವನ್ನ ಈ ಭಾರೀ ತಿಪಟೂರು ತಾಲ್ಲೋಕಿನ ಕೆ.ಬಿ ಕ್ರಾಸ್,ಶ್ರೀಮದ್ ರಂಭಾಪುರಿ ಪ್ರೌಡಶಾಲೆ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದು, ಈ ಭಾರಿಯ ಸಮ್ಮೇಳನ ವಿಶೇಷವಾಗಿ ಆಚರಿಸಬೇಕು ಎನ್ನುವ ದೃಷ್ಠಿಯಿಂದ ಸಾಹಿತ್ಯ ಆಸಕ್ತರು,ಹಾಗೂ ಸದಸ್ಯರ ಜೊತೆ ಚರ್ಚಿಸಿ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ,

ಸಮ್ಮೇಳನದ ಅಧ್ಯಕ್ಷರಾಗಿ ಕೇಂದ್ರ ಮಕ್ಕಳ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.ತಿಪಟೂರು ಶಾಸಕ ಕೆ.ಷಡಕ್ಷರಿ ಮುಖ್ಯಾಅತಿಥಿಗಳಾಗಿ,ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್.ಮುಖಂಡರಾದ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್,ಮಾಜಿ ಟೂಡ ಅಧ್ಯಕ್ಷ ಸಿ.ಬಿ ಶಶಿಧರ್.ಕೆ.ಟಿ ಶಾಂತಕುಮಾರ್ ,ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ. ತಹಸೀಲ್ದಾರ್ ಪವನ್ ಕುಮಾರ್,ಇಒ ಸುದರ್ಶನ್,ಡಿವೈಎಸ್ಪಿ ವಿನಾಯಕ ಎಸ್ ಶೆಟಗೇರಿ,ಹಿಂಡಿಸ್ಕೆರೆ ಗ್ರಾಮಪಂಚಾಯ್ತಿ ಅಧ್ಯಕ್ಷ ವಿದ್ಯಾ ಮಲ್ಲೇಶ್, ಅನೇಕ ಗಣ್ಯರು ಭಾಗವಹಿಸಲಿದ್ದಾರೆ.ತಿಪಟೂರು 6ನೇ ಸಾಹಿತ್ಯಸಮ್ಮೇಳನ ಅವಿಸ್ಮರಣೀಯವಾಗಿಸ ಬೇಕು , ಜನರಲ್ಲಿ ಹಾಗೂ ವಿದ್ಯಾರ್ಥಿಗಳು ಪುಸ್ತಕಗಳನ್ನ ಓದುವ ಗೀಳುಬೆಳಸಿಕೊಳಬೇಕು ಎನ್ನವ ದೃಷ್ಠಿಯಿಂದ ಎಸ್ ಗಂಗಾಧರಯ್ಯ ಸೇರಿದಂತೆ ಅನೇಕ ಬರಹಗಾರರ ಪುಸ್ತಗಳನ್ನ, ಮುದ್ರಿಸಿ ಹಂಚಲಾಗುವುದು, ಕನ್ನಡಾಭಿಮಾನಿಗಳು,ಸಾಹಿತ್ಯಾಸಕ್ತರು.ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಪತ್ರಿಕಾ ಘೋಷ್ಠಿಯಲ್ಲಿ ಕನ್ನಡ ಸಾಹಿತ್ಯಪರೀಷತ್ ಸಂಘಟನಾ ಕಾರ್ಯದರ್ಶಿ ದಿವಾಕರ್ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಸಾಹಿತಿ ಎಸ್ ಗಂಗಾಧರ್ ಅಧ್ಯಕ್ಷತೆಯಲ್ಲಿ ಕವಿ ಘೋಷ್ಠಿಗಳನ್ನ ಅಯೋಜನೆ ಮಾಡಲಾಗಿದೆ, ತಾಲ್ಲೋಕಿನ ಉದಯೋನ್ಮುಖ ಕವಿಗಳು. ಹಾಗೂ ವಿವಿಧ ಕ್ಷೇತ್ರಗಳ ಸಾಧಕರು, ವಿಷಯಗಳನ್ನ ಮಂಡಿಸಲಿದ್ದಾರೆ ಎಂದು ತಿಳಿಸಿದರು

ಪತ್ರಕಾ ಘೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರೀಷತ್ ಕಾರ್ಯದರ್ಶಿ ಶಾರದಮ್ಮ, ಹೋಬಳಿ ಘಟಕದ ಅಧ್ಯಕ್ಷ ಬಳ್ಳೆಕಟ್ಟೆ ಶಂಕರಪ್ಪ. ಗಂಗಾಧರಪ್ಪ.ಪ್ರಾಚಾರ್ಯರಾದ ಶಿವಕುಮಾರ್.ಮಂಜಪ್ಪ ಮುಂತ್ತಾದವರು ಉಪಸ್ಥಿತರಿದರು

ವರದಿ: ಮಂಜುನಾಥ್ ಹಾಲ್ಕುರಿಕೆ

Exit mobile version