KALPATHARU KRANTHI

ಮುಸ್ಲೀಂ ಭಾಂದವರಿಂದ ತಿಪಟೂರು ಶ್ರೀಸತ್ಯಗಣಪತಿ ಗೆ ವಿಶೇಷ ಪೂಜೆ.

Spread the love

ತಿಪಟೂರು ಶ್ರೀ ಸತ್ಯಗಣಪತಿ ಗಾಂಧೀನಗರದಕ್ಕೆ ಪ್ರವೇಶ ಪಡೆದ ಹಿನ್ನೆಲೆ ತಿಪಟೂರು ಗಾಂಧೀನಗರ,ವಿವೇಕನಂದ ನಗರ, ಬಸವೇಶ್ವರ ನಗರ,ಬೋವಿಕಾಲೋನಿ. ಸ್ವೀಪರ್ಸ್ ಕಾಲೋನಿ,ತಮಿಳ್ ಕಾಲೋನಿ, ಚಾಮುಂಡೇಶ್ವರಿ ಬಡಾವಣೆ,ಸೇರಿದಂತೆ ಗಾಂಧೀ ನಗರದ ಭಾಗದ ಬಡಾವಣೆಗಳ ಭಕ್ತಸಮೂಹ ಗಾಂಧೀ ನಗರ ಪೋಲಿಸ್ ಚೌಕಿ ಸರ್ಕಲ್,ಸರ್ಕಾರಿ ಹಿರಿಯಪಾಠಶಾಲೆ ಆವರಣದಲ್ಲಿ ಪೂಜೆಸಲ್ಲಿಸಲಾಯಿತು, ಶ್ರೀಸತ್ಯಗಣಪತಿ ಉತ್ಸವ ಗಾಂಧೀನಗರ ಜಾಮೀಯ ಮಸೀದಿ ಬಳಿ ಮುಸ್ಲೀಂ ಬಾಂದವರು ಬೃಹತ್ ಗಾತ್ರದ ಹೂವಿನ ಹಾರ ಸಮರ್ಪಿಸಿ,ಪೂಜೆಸಲ್ಲಿಸಿದರು

ಜಾಮೀಯ ಮಸೀದಿ ಬಳಿ ಸೌಹಾರ್ದ ಕೂಟ ಆಚರಿಸಲಾಯಿತು.
ತುಮಕೂರು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಅಶೋಕ್,ತಹಸೀಲ್ದಾರ್ ಪವನ್ ಕುಮಾರ್,ಖ್ಯಾತ ವೈದ್ಯರಾದ ಡಾ//ಶ್ರೀಧರ್,ಡಾ//ವಿವೇಚನ್,ಯುವಮುಖಂಡ ನಿಖಿಲ್ ರಾಜಣ್ಣ,ನಗರಸಭಾ ಸದಸ್ಯರಾದ ನದೀಮ್ ಪಾಷ,ಮತಾವಲ್ಲಿಗಳಾದ ಮಹಮದ್ ದಸ್ತಗಿರ್,ಮುನಾವರ್ ಪಾಷ,ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಮಾಜಿ ನಗರಸಭಾ ಸದಸ್ಯ ಪ್ರಸನ್ನ ಕುಮಾರ್ ಮುಂತ್ತಾದವರು ಉಪಸ್ಥಿತರಿದರು.
ಮಸೀದಿ ಕಮಿಟಿಯಿಂದ ಗಣ್ಯರನ್ನ ಸನ್ಮಾನಿಸಲಾಯಿತು.

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version