KALPATHARU KRANTHI

ಶ್ರೀ ಜೈ ಮಾರುತಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಮೂರನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ.

Spread the love

ಖ್ಯಾತ ವೈದ್ಯರಾದ ಸಮಾಜ ಸೇವಕರಾದ ಡಾಕ್ಟರ್ ಜಿ.ಎಸ್ ಶ್ರೀಧರ್ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈ ದೇಶದಲ್ಲಿ ನಾಡ ಧ್ವಜ ಹಿಡಿದು ಅತಿ ಹೆಚ್ಚು ಜೈಕಾರಗಳನ್ನು ಕೂಗುತ್ತಾ ರಾಜ್ಯೋತ್ಸವವನ್ನು ಮಾಡುವವರು ಚಾಲಕರು, ನಾಡು ನುಡಿ ನೆಲ ಜಲದ ವಿಚಾರದಲ್ಲಿ ಕನ್ನಡಾಭಿಮಾನ ಮೆರೆಯುವ ಚಾಲಕರ ಕೆಲಸಕ್ಕೆ ಹೆಮ್ಮೆಪಡಬೇಕು, ಕಷ್ಟಪಟ್ಟು ದುಡಿಮೆ ಮಾಡುವ ಚಾಲಕರು, ನಿಮ್ಮ ಕುಟುಂಬಗಳ ಸುರಕ್ಷತೆಗೆ ಆಧ್ಯತೆ ನೀಡಬೇಕು,ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು. ಸತತ ಆರು ವರ್ಷಗಳ ಪ್ರಯತ್ನದಿಂದ ಕುಮಾರ್ ಆಸ್ಪತ್ರೆ ಇ.ಎಸ್.ಐ ಸೌಲಭ್ಯಗಳನ್ನ ನೀಡುವ ಯೋಜನೆ ಅನುಮತಿ ಪಡೆದುಕೊಂಡಿದೆ. ಚಾಲಕ ವೃತ್ತಿ ಅತಿ ಮುಖ್ಯವಾದ ವೃತ್ತಿ ,ವೃತ್ತಿಯನ್ನು ನಿರ್ವಹಿಸುವ ನೀವು ಸಮಾಜದ ಆಸ್ತಿ, ಹಾಗೆ ಗ್ರಾಮೀಣ ಪ್ರದೇಶದಿಂದ ಬರುವಂತ ಮಹಿಳೆಯರನ್ನು ಸರಿಯಾದ ಸಮಯಕ್ಕೆ ಗಾರ್ಮೆಂಟ್ಸ್ ಗಳಿಗೆ ಬಿಡುವುದರಿಂದ ಕಾರ್ಖಾನೆಯ ಉದ್ದಿಮೆ ಸರಿಯಾಗಿ ನಡೆಯುತ್ತದೆ, ಮಹಿಳೆಯರ ಕುಟುಂಬಗಳಲ್ಲೂ ಭದ್ರತೆ ಚಿಂತೆ ಇರುವುದಿಲ್ಲ.ಅವರ ಜೀವನೋಪಾಯವೂ ಕೂಡ ನಡೆಯುತ್ತದೆ ಎಂದು ತಿಳಿಸಿದರು,

ಸರ್ಕಾರಿ ವೈದ್ಯರಾದ ಡಾ// ರಕ್ಷಿತ್ ಮಾತನಾಡಿ ಆಟೋ ಚಾಲಕರುಹೆಚ್ಚಿನ ಕನ್ನಡಾಭಿಮಾನ ಹೊಂದಿದ್ದಾರೆ,ಶ್ರಮಜೀವಿಗಳಾದ ಚಾಲಕರು,ದುಡಿಮೆಜೊತೆ ಆರೋಗ್ಯದ ಕಡೆ ಹೆಚ್ಚು ಗಮನಕೊಡಿ,ದುಶ್ಚಟಗಳಿಂದ ದೂರವಿದ್ದು,ದುಡಿದ ಹಣದಲ್ಲಿ ಅಲ್ಪಸ್ವಲ್ಪ ಉಳಿತಾಯ ಮಾಡಿ ತಮ್ಮ ಕುಟುಂಬದ ರಕ್ಷಣೆ ಮಾಡಬೇಕು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಮುಖಂಡರಾದ ನವಿಲೆಪರಮೇಶ್,ಜಾಕಿಗಾರ್ಮೇಂಟ್ಸ್ ಚಂದನ್.ವೇರ್ ವೆಲ್ ಗಾರ್ಮೇಟ್ಸ್ ಅಧಿಕಾರಿ ಲೋಕೇಶ್,ಜೈಮಾರುತಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮಹೇಶ್, ರಂಗಸ್ವಾಮಿ ಖಜಾಂಚಿ ಪುಟ್ಟೆಗೌಡ,ಕಾರ್ಯದರ್ಶಿ ಹರ್ಷವರ್ಧನ್,ಜವರೇಗೌಡ,ಮುಖಂಡರಾದ ಯತೀಶ್,ನವೀನ್,ನಾಗೇಶ್ .ಟಿ ರಾಜು ಬೆಣ್ಣೇನಹಳ್ಳಿ,ಚಿನ್ನಿ.ಉಮೇಶ್ ಮಂಜಣ್ಣ ,ಮುಂತ್ತಾದವರು ಉಪಸ್ಥಿತರಿದರು

ವರದಿ; ಮಂಜುನಾಥ್ ಹಾಲ್ಕುರಿಕೆ

Exit mobile version