KALPATHARU KRANTHI

ಜನಸ್ಪಂದನಾ ಟ್ರಸ್ಟ್‌ ತಿಪಟೂರು ವತಿಯಿಂದ ಸಾಂಸ್ಕೃತಿಕ ಪ್ರತಿನಿಧಿಗಳಿಗೆ ಗೌರವ ಸಮರ್ಪಣೆ

Spread the love

ಜನಸ್ಪಂದನಾ ಟ್ರಸ್ಟ್ ತಿಪಟೂರುನಿಂದ ನಗರದಲ್ಲಿನಡೆದ ಜನಸಂಭ್ರಮ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಎಸ್ ಗಂಗಾಧರ್ ಕೇಂದ್ರ ಮಕ್ಕಳ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ.ಬಿಳಿಗೆರೆ ಕೃಷ್ಣಮೂರ್ತಿ, ನಟರಾಜ್ ಹೊನ್ನವಳ್ಳಿ,ಖ್ಯಾತಚಿತ್ರಕಲಾವಿದ ವಿಷ್ಣುಕುಮಾರ್, ಮೈಸೂರು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್ ,ರಂಗಕಲಾವಿದೆ ರಾಜೇಶ್ವರಿ, ವಾಣಿ ಸತೀಶ್ ಮುಂತ್ತಾದವರಿಗೆ ಸನ್ಮಾನಿಸಲಾಯಿತು

ಭಾರತಕ್ಕೆ ಪ್ರಜಾಪ್ರಭುತ್ವವೇ ಹೊಸಧರ್ಮವಾಗಿದೆ,ಪ್ರೀತಿಹಾಗೂ ಸ್ವಾಭಿಮಾನದಿಂದ ಹೊಸಪ್ರಜಾಪ್ರಭುತ್ವಧರ್ಮಕಟ್ಟಿ ಬೆಳಸಬೇಕು ಎಂದು ಖ್ಯಾತ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.
ನಗರದ ಜನಸ್ಪಂದನಾ ಟ್ರಸ್ಟ್ ವತಿಯಿಂದ ಆಯೋಜಿಸಿದ ಜನಸಂಭ್ರಮ ಕಾರ್ಯಕ್ರಮದಲ್ಲಿ ತಿಪಟೂರು ಸಾಂಸ್ಕೃತಿಕ ನಾಯಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಜಾತಿರಾಜಕಾರಣ,ಧರ್ಮರಾಜಕಾರಣ,ಭಾಷಾರಾಜಕಾರಣದ ಸೇರಿದಂತೆ ಎಲ್ಲಾ ಕ್ಷೇತ್ರಗಳಲೂ ಕಲುಷಿತವಾಗುತ್ತಿರುವ ಸಮಯದಲ್ಲಿ ರಾಜಕಾರಣ ಎಲ್ಲಾ ಬದಲಾವಣೆಗಳಿಗು ಮುಲಾಮು,ಆಗಿದೆ ನಮ್ಮ ರಾಜಕೀಯ, ಬದಲಾವಣೆಯ ಗಾಳಿಗೆ ಒಳಗಾಗಬೇಕು.ಪ್ರಜಾಪ್ರಭುತ್ವ ಭಾರತ ಹೊಸಧರ್ಮವಾಗಿದ್ದು ನಾವು, ಹೊಸಪ್ರಜಾಪ್ರಭುತ್ವ ಧರ್ಮವನ್ನ ಪ್ರೀತಿಯ ನೆಲೆಗಟ್ಟಿನಲ್ಲಿ ಕಟ್ಟುವಕೆಲಸ ಮಾಡಬೇಕಿದೆ,ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಮೈಸೂರು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್ ಮಾತನಾಡಿ,ತಿಪಟೂರು ನೆಲ ಪ್ರತಿರೋಧದ ಗುಣಹೊಂದಿದೆ,ಅನೇಕ ಸಾಂಸ್ಕೃತಿಕ ನಾಯಕರಿಗೆ ಜನ್ಮ ನೀಡುವ ಜೊತೆಗೆ,ಭೂಮಿಕೆ ಹೊದಗಿಸಿದೆ,ಸಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಾಜಕಾರಣಕ್ಕೆ ಹೊಸರೂಪಕೊಡುವ ಮೂಲಕ ಟೂಡ ಶಶಿಧರ್ ಮತ್ತು ತಂಡ ಹೊಸ ಬರವಸೆ, ಮೂಡಿಸಿದೆಎಂದು ತಿಳಿಸಿದರು

ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಟೂಡಾ ಶಶಿಧರ್ ಮಾತನಾಡಿ ಜನಸ್ಪಂದನಾ ಟ್ರಸ್ಟ್ ಹಲವಾರು ಸಹೃದಯಿ ಸ್ನೇಹಿತರೊಂದಿಗೆ, ಸಮುದಾಯಗಳೆಡೆಗೆ ನಮ್ಮ ನಡಿಗೆ ಘೋಷ ವಾಕ್ಯದೊಂದಿಗೆ ನಾಟಕಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ಕೋವಿಡ್ ಕಾಲಘಟ್ಟದಲ್ಲಿ ಜನಸಾಮಾನ್ಯರಿಗೆ ನೆರವು ನೀಡುವ, ಜೊತೆಗೆ, ರಾಜ್ಯಸರ್ಕಾರದ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಡೆಸಿದ ಜನಚಳುವಳಿಯಲ್ಲಿ ನಮ್ಮ ಸಂಘಟನೆಯ, ಮಹತ್ವದ ಪಾತ್ರವಹಿಸಿದ ಹೆಮ್ಮೆ ನಮಗಿದೆ,ಎಲ್ಲಾ ಜನಚಳುವಳಿ ಒಡನಾಡಿಗಳೊಂದಿಗೆ ಅನೇಕ ಮಹತ್ವದ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಸಂಘಟಕರಾದ ಶ್ರೀಕಾಂತ್ ಕೆಳಹಟ್ಟಿ, ದಿಲಾವರ್,ಸತೀಶ್ ಕಾಡಶೆಟ್ಟಿಹಳ್ಳಿ,ಅಲ್ಲಾಭಕಷ್,ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ಜಾಹಿರಾತು:

Exit mobile version